06/06/2026
“ಅಬ್ಬಾ ಏನಮ್ಮ ನೀನು! ನಲವತ್ತು ವರ್ಷಕ್ಕೋ ಐವತ್ತು ವರ್ಷಕ್ಕೋ ಸಂಸಾರಿಯಾಗೋಣ ಅಂದರೆ ಆ ಪ್ಲಾನ್ ಕೂಡ ಹೊಳೆ ನೀರಲ್ಲಿ ಹುಣಸೆಹಣ್ಣು ತೊಳೆಯುವ ಹಾಗೆ ಮಾತಾಡ್ತೀಯಾ!” ಶಶಾಂಕ್ನ ಮುಖ ಕೆಂಪಾಗಿತ್ತು ಅವನ ಧ್ವನಿಯಲ್ಲಿ ಅಸಹನೆ. ಅಡುಗೆಮನೆಯಿಂದಲೇ ಪಲ್ಲವಿ ನಕ್ಕರು ತುಟಿಯಂಚಿನ ನಗುವನ್ನು ತಡೆಯುತ್ತಾ “ಮೊದಲು ಶರೂಗೆ ಮದುವೆಯಾಗಲಿ ಆಮೇಲೆ ನಿನ್ನ ನಾಲ್ಕು ಜನ ಅಣ್ಣಂದಿರದು ಮುಗಿದ ಮೇಲೆ ನಿನ್ನ ಸರದಿ. ಅದಕ್ಕೆ ಏನಿಲ್ಲ ಅಂದರೂ ಮಿನಿಮಮ್ ಹತ್ತು ವರ್ಷ ಟೈಮ್ ಇದೆ. ಅದೂ ನಿನ್ನ ಅದೃಷ್ಟಕ್ಕೆ ಹುಡುಗಿ ಸಿಕ್ಕರೆ ಮಾತ್ರ!” ದೆಹಲಿಯ ಅವರ ಮನೆಯಲ್ಲಿ ಶಶಾಂಕ್ ತನ್ನ ಕಪ್ಪು ಜೀನ್ಸ್ ಹುಡುಕುತ್ತಾ ಅಮ್ಮನ ಮೇಲೆ ಸಿಟ್ಟಾಗಿದ್ದ. ಋದ್ವೇಗ್ನ ಬೈಕ್ ಹಾಳಾಗಿರುವುದರಿಂದ ಅವನನ್ನು ಪಿಕ್ ಮಾಡಿಕೊಂಡು ಕಾಲೇಜಿಗೆ ಹೋಗಬೇಕಿತ್ತು. ಆದರೆ ಅವನ ಮನಸ್ಸಿನಲ್ಲಿ ಬೇರೆಯದೇ ಯೋಚನೆಗಳು ಗಿರಕಿ ಹೊಡೆಯುತ್ತಿದ್ದವು. ಹತ್ತು ವರ್ಷದ ಹಿಂದಿನ ಶಾರ್ವರಿಯ ಮುಗ್ಧ ಚಿತ್ರ ಅವನ ಹೃದಯದಲ್ಲಿ ಅಚ್ಚೊತ್ತಿತ್ತು. ಪ್ರತಿದಿನ ಅವಳಿಗೊಂದು ಕವನ ಅರ್ಪಿಸುತ್ತಿದ್ದ. “ಋದ್ ಋದ್! ಸ್ನಾನ ಮುಗಿದಿಲ್ವಾ? ಬೇಗ ಬಾ!” ನಂದಿನಿ ಋದ್ವೇಗ್ನ ತಾಯಿ ಬಾತ್ರೂಮ್ ಸಿಂಗರ್ ಮಗನ ಹಾಡು ಕೇಳಿ ನಗುತ್ತಾ ಒಳಬಂದರು. “ಯಾರೋ ‘ಹರಿ ಎನ್.ಐ.’ ಅಂತ ಮೂರು ಸಲ ಕಾಲ್ ಮಾಡಿದ್ರು. ಏನೋ ಅರ್ಜೆಂಟ್ ಇರಬೇಕು.” “ಹರಿಣಿನಾ? ಅವಳ್ಯಾಕೆ ಕಾಲ್ ಮಾಡಿದಳು?” ಋದ್ವೇಗ್ನ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು. “ಹರಿಣಿ ಅಲ್ವೋ ‘ಹರಿ ಎನ್.ಐ.’ ಅಂತ ಇದೆ” ನಂದಿನಿ ಅನುಮಾನದಿಂದ ನೋಡಿದರು. “ಹ್ಮ್ ಹರಿ ಅಮ್ಮ” ತಲೆ ಒರೆಸುತ್ತಾ ಮೊಬೈಲ್ ಕಸಿದುಕೊಂಡ. ಆದರೆ ಅವನ ಪ್ಯಾಂಟಿನ ಜೇಬಿನಲ್ಲಿದ್ದ ಜಂಗಮವಾಣಿ ವೈಬ್ರೇಟ್ ಆಗುತ್ತಲೇ ಇತ್ತು. ಪರದೆಯ ಮೇಲೆ ‘ಹರಿಣಿ’ ಎಂಬ ಹೆಸರು ಮಿನುಗುತ್ತಿತ್ತು. ಅವನು ತಲೆ ಕೆರೆದುಕೊಂಡ “ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ...” ಎಂದು ಕರೆ ಕಟ್ ಮಾಡಿ ಶಶಾಂಕ್ ಕಾಯುತ್ತಿದ್ದ ಸೋಫಾದತ್ತ ಧಾವಿಸಿದ. “ಋದ್ ಆಗಿಲ್ವಾ? ಬಾರೋ ಬೇಗ!” ಶಶಾಂಕ್ನ ಧ್ವನಿಯಲ್ಲಿ ಅಸಹನೆ. ಋದ್ವೇಗ್ನ ಮುಖದಲ್ಲಿ ಬೆವರಿನ ಹನಿಗಳು. ಮನೆಯ ನಿಶಬ್ಧತೆ ಅವನ ಆತಂಕವನ್ನು ಹೆಚ್ಚಿಸಿತ್ತು. ಅವನು ಏನನ್ನು ಮರೆಮಾಚುತ್ತಿದ್ದ? ಹರಿಣಿ ಯಾರು? ಶಾರ್ವರಿ ಮತ್ತು ಋದ್ವೇಗ್ನ ಭವಿಷ್ಯ ಏನಾಗಲಿದೆ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
ರಾಷ್ಟ್ರ ರಾಜಧಾನಿಯ ರೈಲ್ವೆ ನಿಲ್ದಾಣದ ಕಾಲು ದಾರಿ ಅವಳ ಪಾದಗಳಿಂದ ಹೆಜ್ಜೆ ಗುರುತುಗಳನ್ನ ಹಿಂಬಾಲಿಸಿಕೊಂಡು ಎಣಿಸುತಿದೆ ಕಾರ್ಮೋಡದ...