Pratilipi Kannada - ಪ್ರತಿಲಿಪಿ ಕನ್ನಡ

Pratilipi Kannada - ಪ್ರತಿಲಿಪಿ ಕನ್ನಡ Discover, read and share your favorite stories, poems and books in a language, device and format of your choice.
(872)

     “ಅಬ್ಬಾ ಏನಮ್ಮ ನೀನು! ನಲವತ್ತು ವರ್ಷಕ್ಕೋ ಐವತ್ತು ವರ್ಷಕ್ಕೋ ಸಂಸಾರಿಯಾಗೋಣ ಅಂದರೆ ಆ ಪ್ಲಾನ್ ಕೂಡ ಹೊಳೆ ನೀರಲ್ಲಿ ಹುಣಸೆಹಣ್ಣು ತೊಳೆಯುವ ...
06/06/2026


“ಅಬ್ಬಾ ಏನಮ್ಮ ನೀನು! ನಲವತ್ತು ವರ್ಷಕ್ಕೋ ಐವತ್ತು ವರ್ಷಕ್ಕೋ ಸಂಸಾರಿಯಾಗೋಣ ಅಂದರೆ ಆ ಪ್ಲಾನ್ ಕೂಡ ಹೊಳೆ ನೀರಲ್ಲಿ ಹುಣಸೆಹಣ್ಣು ತೊಳೆಯುವ ಹಾಗೆ ಮಾತಾಡ್ತೀಯಾ!” ಶಶಾಂಕ್‌ನ ಮುಖ ಕೆಂಪಾಗಿತ್ತು ಅವನ ಧ್ವನಿಯಲ್ಲಿ ಅಸಹನೆ. ಅಡುಗೆಮನೆಯಿಂದಲೇ ಪಲ್ಲವಿ ನಕ್ಕರು ತುಟಿಯಂಚಿನ ನಗುವನ್ನು ತಡೆಯುತ್ತಾ “ಮೊದಲು ಶರೂಗೆ ಮದುವೆಯಾಗಲಿ ಆಮೇಲೆ ನಿನ್ನ ನಾಲ್ಕು ಜನ ಅಣ್ಣಂದಿರದು ಮುಗಿದ ಮೇಲೆ ನಿನ್ನ ಸರದಿ. ಅದಕ್ಕೆ ಏನಿಲ್ಲ ಅಂದರೂ ಮಿನಿಮಮ್ ಹತ್ತು ವರ್ಷ ಟೈಮ್ ಇದೆ. ಅದೂ ನಿನ್ನ ಅದೃಷ್ಟಕ್ಕೆ ಹುಡುಗಿ ಸಿಕ್ಕರೆ ಮಾತ್ರ!” ದೆಹಲಿಯ ಅವರ ಮನೆಯಲ್ಲಿ ಶಶಾಂಕ್ ತನ್ನ ಕಪ್ಪು ಜೀನ್ಸ್ ಹುಡುಕುತ್ತಾ ಅಮ್ಮನ ಮೇಲೆ ಸಿಟ್ಟಾಗಿದ್ದ. ಋದ್ವೇಗ್‌ನ ಬೈಕ್ ಹಾಳಾಗಿರುವುದರಿಂದ ಅವನನ್ನು ಪಿಕ್ ಮಾಡಿಕೊಂಡು ಕಾಲೇಜಿಗೆ ಹೋಗಬೇಕಿತ್ತು. ಆದರೆ ಅವನ ಮನಸ್ಸಿನಲ್ಲಿ ಬೇರೆಯದೇ ಯೋಚನೆಗಳು ಗಿರಕಿ ಹೊಡೆಯುತ್ತಿದ್ದವು. ಹತ್ತು ವರ್ಷದ ಹಿಂದಿನ ಶಾರ್ವರಿಯ ಮುಗ್ಧ ಚಿತ್ರ ಅವನ ಹೃದಯದಲ್ಲಿ ಅಚ್ಚೊತ್ತಿತ್ತು. ಪ್ರತಿದಿನ ಅವಳಿಗೊಂದು ಕವನ ಅರ್ಪಿಸುತ್ತಿದ್ದ. “ಋದ್ ಋದ್! ಸ್ನಾನ ಮುಗಿದಿಲ್ವಾ? ಬೇಗ ಬಾ!” ನಂದಿನಿ ಋದ್ವೇಗ್‌ನ ತಾಯಿ ಬಾತ್‌ರೂಮ್ ಸಿಂಗರ್ ಮಗನ ಹಾಡು ಕೇಳಿ ನಗುತ್ತಾ ಒಳಬಂದರು. “ಯಾರೋ ‘ಹರಿ ಎನ್.ಐ.’ ಅಂತ ಮೂರು ಸಲ ಕಾಲ್ ಮಾಡಿದ್ರು. ಏನೋ ಅರ್ಜೆಂಟ್ ಇರಬೇಕು.” “ಹರಿಣಿನಾ? ಅವಳ್ಯಾಕೆ ಕಾಲ್ ಮಾಡಿದಳು?” ಋದ್ವೇಗ್‌ನ ಧ್ವನಿಯಲ್ಲಿ ಆತಂಕ ಸ್ಪಷ್ಟವಾಗಿತ್ತು. “ಹರಿಣಿ ಅಲ್ವೋ ‘ಹರಿ ಎನ್.ಐ.’ ಅಂತ ಇದೆ” ನಂದಿನಿ ಅನುಮಾನದಿಂದ ನೋಡಿದರು. “ಹ್ಮ್ ಹರಿ ಅಮ್ಮ” ತಲೆ ಒರೆಸುತ್ತಾ ಮೊಬೈಲ್ ಕಸಿದುಕೊಂಡ. ಆದರೆ ಅವನ ಪ್ಯಾಂಟಿನ ಜೇಬಿನಲ್ಲಿದ್ದ ಜಂಗಮವಾಣಿ ವೈಬ್ರೇಟ್ ಆಗುತ್ತಲೇ ಇತ್ತು. ಪರದೆಯ ಮೇಲೆ ‘ಹರಿಣಿ’ ಎಂಬ ಹೆಸರು ಮಿನುಗುತ್ತಿತ್ತು. ಅವನು ತಲೆ ಕೆರೆದುಕೊಂಡ “ನೀವು ಕರೆ ಮಾಡುತ್ತಿರುವ ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ...” ಎಂದು ಕರೆ ಕಟ್ ಮಾಡಿ ಶಶಾಂಕ್ ಕಾಯುತ್ತಿದ್ದ ಸೋಫಾದತ್ತ ಧಾವಿಸಿದ. “ಋದ್ ಆಗಿಲ್ವಾ? ಬಾರೋ ಬೇಗ!” ಶಶಾಂಕ್‌ನ ಧ್ವನಿಯಲ್ಲಿ ಅಸಹನೆ. ಋದ್ವೇಗ್‌ನ ಮುಖದಲ್ಲಿ ಬೆವರಿನ ಹನಿಗಳು. ಮನೆಯ ನಿಶಬ್ಧತೆ ಅವನ ಆತಂಕವನ್ನು ಹೆಚ್ಚಿಸಿತ್ತು. ಅವನು ಏನನ್ನು ಮರೆಮಾಚುತ್ತಿದ್ದ? ಹರಿಣಿ ಯಾರು? ಶಾರ್ವರಿ ಮತ್ತು ಋದ್ವೇಗ್‌ನ ಭವಿಷ್ಯ ಏನಾಗಲಿದೆ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ರಾಷ್ಟ್ರ ರಾಜಧಾನಿಯ ರೈಲ್ವೆ ನಿಲ್ದಾಣದ ಕಾಲು ದಾರಿ ಅವಳ ಪಾದಗಳಿಂದ ಹೆಜ್ಜೆ ಗುರುತುಗಳನ್ನ ಹಿಂಬಾಲಿಸಿಕೊಂಡು ಎಣಿಸುತಿದೆ ಕಾರ್ಮೋಡದ...

     "ಇದೇನೊ ಮಂಜ ಇಷ್ಟೊತ್ತಾಯ್ತು ಅಣ್ಣ ಬರಲೆ ಇಲ್ವಲ್ಲೊ.. ಈ ಹಿಂದೆ ಯಾವತ್ತು ಅರ್ಧ ಗಂಟೆಗು ಹೆಚ್ಚು ಪೋಲಿಸ್ ಸ್ಟೇಷನ್ ನಲ್ಲಿ ನಾವು ಇದ್ದ ಉದಾ...
06/06/2026


"ಇದೇನೊ ಮಂಜ ಇಷ್ಟೊತ್ತಾಯ್ತು ಅಣ್ಣ ಬರಲೆ ಇಲ್ವಲ್ಲೊ.. ಈ ಹಿಂದೆ ಯಾವತ್ತು ಅರ್ಧ ಗಂಟೆಗು ಹೆಚ್ಚು ಪೋಲಿಸ್ ಸ್ಟೇಷನ್ ನಲ್ಲಿ ನಾವು ಇದ್ದ ಉದಾಹರಣೆಯೆ ಇಲ್ಲ, ಅಂತದ್ದರಲ್ಲೀಗ ಹತ್ತಿರ ಹತ್ತಿರ ಒಂದು ಗಂಟೆ ಮೇಲಾಯ್ತು ಈ ಯಪ್ಪ ನಮ್ಮುನ್ನಿಲ್ಲಿ ಕರೆದುಕೊಂಡು ಬಂದು, ಆದ್ರೂ ಅಣ್ಣ ಯಾಕೋ ಬರ್ಲಿಲ್ಲ, ಈ ಯಪ್ಪ ಹೊಸ ಪೋಲಿಸು, ಯಾವುದಕ್ಕು ಬಗ್ಗಲ್ಲ ಅಂತ ಅಣ್ಣನಿಗೂ ಅರ್ಥ ಆಗಿ ಅವರು ನಮ್ಮ ಕೈ ಬಿಟ್ಟು ಬಿಟ್ರೋ ಹೇಗೆ..?" ಪೋಲಿಸ್ ಸ್ಟೇಷನ್ನಿನ ಒಳಗೆ ಖೈದಿಗಳ ಸೆಲ್ ನಲ್ಲಿ ನಿಂತು ನುಡಿದ ಒಬ್ಬನಿಗೆ "ಇದೇನ್ ಕೆಂಪ, ಅಣ್ಣನ ಬಗ್ಗೆ ನಿನಗೆ ಗೊತ್ತಿದ್ದು ನೀನು ಹೀಗೆ ಮಾತಾಡ್ತಿಯಲ್ಲ, ಅಣ್ಣ ಬಂದೆ ಬರ್ತಾನೆ ತಡಿ ಇನ್ನು ಸ್ವಲ್ಪ ಹೊತ್ತು ಕಾಯೋಣ" ಎಂದ ಮಂಜ.

ತನ್ನ ಕುರ್ಚಿಯ ಮೇಲೆ ಕುಳಿತು ಯಾವುದೊ ಫೈಲ್ ನೋಡುತ್ತಿದ್ದ ಆ ಸ್ಟೇಷನ್ನಿನ ಎಸ್ ಐ ಸುನೀಲ್ ಬಳಿ ಬಂದ ಅದೇ ಸ್ಟೇಷನ್ನಿನ ಹೆಡ್ ಕನ್ಸ್ಟೇಬಲ್ ರಾಮಸ್ವಾಮಿ "ಸಾರ್ ನಾನು ನಿಮಗೊಂದು ವಿಷಯ ಹೇಳಿದ್ರೆ ನೀವು ತಪ್ಪು ತಿಳಿಯಲ್ಲ ತಾನೇ.." ಎಂದಾಗ ತಾನು ನೋಡುತ್ತಿದ್ದ ಫೈಲ್ ಅನ್ನು ಪಕ್ಕಕ್ಕಿಟ್ಟು ಹೇಳಿ ಎಂಬಂತೆ ಅವರತ್ತ ನೋಡಿದ ಸುನೀಲ್.

"ಸಾರ್.. ಈ ರೌಡಿಗಳನ್ನು ಬಿಟ್ಟು ಬಿಡೋದೆ ಒಳ್ಳೆಯದು ಅನ್ನಿಸುತ್ತೆ ಸಾರ್.. ನಿಮಗಿನ್ನು ಅವರ ಬಗ್ಗೆ ಗೊತ್ತಿಲ್ಲ, ನೀವು ಯಾರನ್ನು ಎದುರು ಹಾಕಿಕೊಳ್ತಿದ್ದಿರಾ ಅಂತ ನಿಮಗಿನ್ನು ಅರ್ಥ ಆಗಿಲ್ಲ ಸಾರ್.." ಎಂದು ರಾಗ ಎಳೆದ ರಾಮಸ್ವಾಮಿಗೆ "ಏನ್ರಿ‌ ರಾಮ್ ಸ್ವಾಮಿ, ನಿಮಗೆ ಸಂಬಳ ಕೊಡ್ತಿರೋದು ಸರ್ಕಾರಾನೋ ಅಥವಾ ಈ ಪುಡಿ ರೌಡಿಗಳ ಕಡೆಯವರೊ, ತಗೊಳೊ ಸಂಬಳಕ್ಕೆ ನಿಯ್ಯತ್ತಾಗಿ ಡ್ಯೂಟಿ ಮಾಡ್ರಿ, ಅದು ಬಿಟ್ಟು ನನಗೆ ಬೇಡದ ಸಲಹೆ ಕೊಡೊದಕ್ಕೆ ಬರ್ಬೇಡಿ, ಹೋಗಿ ಕೆಲಸ ನೋಡ್ಕೊಳಿ" ಎಂದು ಕೊಂಚ ಗದರಿದಂತೆ ನುಡಿದಿದ್ದ ಎಸ್ ಐ ಸುನೀಲ್.

"ಹಾಗಲ್ಲ ಸಾರ್ ನಿಮ್ಮ ಒಳ್ಳೆದಕ್ಕೆ ನಾನು ಹೇಳ್ತ ಇರೋದು, ಸ್ವಲ್ಪ ನನ್ನ ಮಾತು ಕೇಳಿ ಸರ್.." ಎಂದು ರಾಮಸ್ವಾಮಿ ಹೇಳಿದಾಗ "ಹೋಗಿ ನಿಮ್ಮ ಕೆಲಸ ನೋಡ್ಕೊಳಿ ಅಂತ ಹೇಳ್ದೆ, ವಯಸ್ಸಲ್ಲಿ ದೊಡ್ಡೊರು ಅಂತ ಸುಮ್ನೆ ಇದ್ದಿನಿ ಹೋಗ್ರಿ ಸುಮ್ನೆ" ಎಂದು ಗಡುಸಾಗಿ ಸುನೀಲ್ ಹೇಳಲು ಬಾಯಿ ಮುಚ್ಚಿ ಅಲ್ಲಿಂದ ಹೋಗಿದ್ದ ರಾಮಸ್ವಾಮಿ.

ಅಷ್ಟರಲ್ಲೆ ಪೋಲಿಸ್ ಸ್ಟೇಷನ್ನಿನ ಒಳಗೆ ನಮ್ಮ ವಿರಾಜ್ ನ ಎಂಟ್ರಿ ಆಗಿತ್ತು.ಅವನ ಅಕ್ಕ ಪಕ್ಕ ಶಿವಣ್ಣ ಮತ್ತು ಅವಿನಾಶ್ ಇದ್ದರು.
ನೇರವಾಗಿ ಒಳ ಬಂದ ವಿರಾಜ್ ಎಸ್ ಐ ಸುನೀಲ್ ನ ಮುಂದಿನ ಖುರ್ಚಿ ಎಳೆದು ಕುಳಿತ.
ಅವನನ್ನು ಗುರಾಯಿಸುತ್ತ‌ "ಏನು ವಿಷಯ " ಎಂದು ಹುಬ್ಬು ಗಂಟಿಕ್ಕಿ ಪ್ರಶ್ನಿಸಿದ ಸುನೀಲ್ ಗೆ ಸೆಲ್ ಕಡೆ ಕೈ ತೋರಿಸುತ್ತ ತನ್ನ ಕಣ್ಣಿಗೆ ಧರಿಸಿದ್ದ ತಂಪು ಕನ್ನಡಕ ತೆಗೆಯುತ್ತ "ಅವರು ನಮ್ಮ ಹುಡುಗರು, ಅವರನ್ನೆಲ್ಲ ಬಿಟ್ಟು ಕಳುಹಿಸು" ಎಂದ ವಿರಾಜ್.
"ನಿಮ್ಮ ಹುಡುಗರಾದ್ರೆ ಬಿಟ್ಟು ಬಿಡಬೇಕಾ..?, ರಸ್ತೆಯಲ್ಲಿ ಹೊಡೆದಾಡುವಾಗ ರೆಡ್ ಹ್ಯಾಂಡ್ ಆಗಿ ನನ್ನ ಕೈ ಗೆ ಸಿಕ್ಕಿ ಬಿದ್ದಿದ್ದಾರೆ, ಇವರನ್ನೆಲ್ಲ ಬಿಡೊದಕ್ಕಾಗಲ್ಲ" ಮುಖದ ಬಿಗುವನ್ನು ಕೊಂಚವು ಸಡಿಲಿಸದೆ ಹೇಳಿದ್ದ ಸುನೀಲ್.

"ಸುಮ್ನೆ ಬಿಡೋದು ಬೇಡ, ಈಗ ನಿನಗೊಂದು ಕಾಲ್ ಬರತ್ತೆ ಆ ಕಾಲ್ ರಿಸೀವ್ ಮಾಡಿ, ಮಾತಾಡಿ, ನಂತರ ಆರಾಮಾಗಿ ಬಿಡು ಪರವಾಗಿಲ್ಲ, ನನ್ನ ಬಳಿ ಸಾಕಷ್ಟು ಸಮಯ ಇದೆ" ಎಂದ ವಿರಾಜ್ ಮೈ ಮುರಿಯುತ್ತ " ರಾಮ ಸ್ವಾಮಿ ನಮಗೆ ಮೂರು ಟೀ ತರಿಸು" ಎಂದಾಗ ಎಸ್ ಐ ಸುನೀಲ್ ಕಡೆ ನೋಡಿದ ರಾಮಸ್ವಾಮಿಗೆ "ಏನ್ ರಾಮ್ ಸ್ವಾಮಿ‌ ನಿಮ್ಮ ಎಸ್ ಐ ಮುಖ ನೋಡ್ತಿದ್ಯಲ್ಲ, ಹೋಗು ಹೋಗಿ ಮೂರು ಟೀ ತಗೋ ಬಾ" ಎಂದು ವಿರಾಜ್ ಮತ್ತೊಮ್ಮೆ ಹೇಳಿದಾಗ ಸ್ಟೇಷನ್ ನಿಂದ ಟೀ ಅಂಗಡಿಯತ್ತ ನಡೆದ ರಾಮ ಸ್ವಾಮಿ.

"ನನ್ನ ಸ್ಟೇಷನ್ ಗೆ ಬಂದು, ನನ್ನ ಮುಂದೆನೆ ಕುಳಿತು, ನನ್ನನ್ನು ಏಕ ವಚನದಲ್ಲಿ ಮಾತಾಡಿಸಿದ್ದು ಅಲ್ಲದೆ ನಮ್ಮ ಸ್ಟಾಫ್ ಹತ್ತಿರವೆ ಟೀ ತರೋದಕ್ಕೆ ಹೇಳ್ತಿಯಾ.. ಎಷ್ಟೊ ಕೊಬ್ಬು ನಿನಗೆ, ಒದ್ದು ಒಳಗೆ ಹಾಕಿದ ಅಂದ್ರೆ..." ಎಂದು ಸುನೀಲ್ ಮೇಲೆದ್ದಾಗ "ಏಯ್.. ಯಾರತ್ರ ಮಾತಾಡ್ತ ಇದ್ದಿಯಾ, ಯಾರನ್ನ ನೀನು ಏಕ ವಚನದಲ್ಲಿ ಮಾತಾಡ್ಸ್ತ ಇದ್ದಿಯಾ ಅಂತ ಗೊತ್ತ ನಿನಗೆ.." ಈ ಬಾರಿ ಶಿವಣ್ಣ ಅವಾಜ್ ಹಾಕಿದ....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

' ಜಿಲ್ಲಾ ಪೋಲಿಸ್ ಠಾಣೆ ' "ಇದೇನೊ ಮಂಜ ಇಷ್ಟೊತ್ತಾಯ್ತು ಅಣ್ಣ ಬರಲೆ ಇಲ್ವಲ್ಲೊ.. ಈ ಹಿಂದೆ ಯಾವತ್ತು ಅರ್ಧ ಗಂಟೆಗು ಹೆಚ್ಚು ಪೋಲಿಸ್ ಸ...

     “ಪೂರ್ಣಾ!” ಕೌಸಲ್ಯರವರ ಕಿರಿಚಾಟ ಅಡುಗೆಮನೆಯಿಂದ ಹೊರಬಂದಿತು. “ರಾಮಾ ಬೇಗ ಬಾ ಇಲ್ಲಿ!” ರಾಮ ಓಡಿಬಂದ. ನೆಲದ ಮೇಲೆ ಕುಸಿದು ಬಿದ್ದಿದ್ದ ಪೂರ...
06/06/2026


“ಪೂರ್ಣಾ!” ಕೌಸಲ್ಯರವರ ಕಿರಿಚಾಟ ಅಡುಗೆಮನೆಯಿಂದ ಹೊರಬಂದಿತು. “ರಾಮಾ ಬೇಗ ಬಾ ಇಲ್ಲಿ!” ರಾಮ ಓಡಿಬಂದ. ನೆಲದ ಮೇಲೆ ಕುಸಿದು ಬಿದ್ದಿದ್ದ ಪೂರ್ಣಾಳನ್ನು ನೋಡಿ ಅವನಿಗೆ ಭಯ ಶುರುವಾಯಿತು. “ಏನಾಯ್ತಮ್ಮಾ ಇವಳಿಗೆ? ಯಾಕೆ ಹೀಗೆ ಬಿದ್ದಿದ್ದಾಳೆ?” ರಾಮ ಕೇಳಿದ. “ಅದನ್ನು ನೀನೇ ಹೇಳಬೇಕು! ಮೊದಲೇ ಕೋಪ ಜಾಸ್ತಿ ನಿನಗೆ. ಏನೋ ಮಾಡಿದೆ ಅವಳಿಗೆ ಹೊಡೆದೆಯೋ ಏನೋ? ಯಾಕೆ ಅಷ್ಟು ದೊಡ್ಡ ಶಬ್ದ ಆಯ್ತು?” ಕೌಸಲ್ಯರವರ ಧ್ವನಿ ನಡುಗುತ್ತಿತ್ತು. ಪೂರ್ಣಾ ಎರಡು ದಿನಗಳಿಂದ ಸರಿಯಾಗಿ ನಿದ್ದೆ ಊಟವಿಲ್ಲದೆ ಕಣ್ಣುಗಳು ಕೆಂಪಾಗಿ ಮುಖ ಸೊರಗಿ ಹೋಗಿತ್ತು. ಅವಳಿಗೆ ಏನೂ ಅರ್ಥವಾಗುತ್ತಿರಲಿಲ್ಲ – ಆ ರಾತ್ರಿ ಏನಾಯಿತು ತನ್ನ ಈ ಸ್ಥಿತಿಗೆ ಕಾರಣವೇನು? “ಅವಳಿಂದಲೇ ತಾನೇ ನನಗಿಷ್ಟು ಅವಮಾನ ಆಗಿದ್ದು? ಅದಕ್ಕೆ ಅವಳ ಮೇಲೆ ಕೋಪ ಬಂದಿದ್ದು ನಿಜ. ಆ ಕೋಪದಲ್ಲೇ ತಟ್ಟೆಯನ್ನು ಗೋಡೆಗೆ ಎಸೆದೆ ಅಷ್ಟೇ. ನಾನು ಅವಳಿಗೆ ಹೊಡೆದಿಲ್ಲ!” ರಾಮ ತನ್ನ ಅಸಹಾಯಕತೆಯನ್ನು ಹೊರಹಾಕಿದ. “ನಿಲ್ಸೋ ಸಾಕು! ನಿನಗಿಂತ ಹೆಚ್ಚು ಅವಮಾನ ಅವಳಿಗೂ ಆಗಿದೆ. ಈ ಸಮಾಜ ತಪ್ಪು ಮಾಡಿದ ಗಂಡಸರನ್ನಾದರೂ ಒಂದು ಪಕ್ಷ ಒಪ್ಪಿಕೊಳ್ಳುತ್ತದೆ ಆದರೆ ಹೆಣ್ಣುಮಕ್ಕಳಿಗೆ ಅಂತ ಒಂದು ಅವಕಾಶನೂ ಕೊಡಲ್ಲ” ಕೌಸಲ್ಯರವರ ಮಾತು ರಾಮನನ್ನು ತಟ್ಟಿತು. “ಮೊದಲು ಅವಳಿಗೆ ಏನಾಗಿದೆ ಅಂತ ನೋಡೋಣ. ಇವಳನ್ನು ರೂಮಲ್ಲಿ ಮಲಗಿಸು. ಹಾ ಹಾಗೆ ವಿಷ್ಣು ಅಣ್ಣನಿಗೆ ಫೋನ್ ಮಾಡಿ ಈ ಕೂಡಲೇ ಬರಕ್ಕೆ ಹೇಳು.” ರಾಮ ಡಾಕ್ಟರ್ ವಿಷ್ಣುರವರಿಗೆ ಕರೆ ಮಾಡುತ್ತಿದ್ದಾಗಲೇ ಪೂರ್ಣಾಳ ಅಣ್ಣ ರಮೇಶ್ ಧಾವಿಸಿ ಬಂದ. “ಅಮ್ಮಾ ಏನಾಯ್ತು ಇವಳಿಗೆ? ಯಾಕೆ ಹೀಗೆ ಮಲಗಿದ್ದಾಳೆ?” ಅವನ ಕಣ್ಣುಗಳು ರಾಮನ ಮೇಲೆ ಕೆಂಡ ಕಾರಿದವು. “ರಾಮ್ ಏನ್ ಮಾಡಿದೆ ಅವಳಿಗೆ? ಯಾಕೆ ಹೀಗಾಗಿದ್ದಾಳೆ?” “ಸಮಾಧಾನ ಕಣಪ್ಪ. ಅವನು ಇವಳಿಗೇನು ಮಾಡ್ಲಿಲ್ಲ. ಎರಡು ದಿನಗಳಿಂದ ಹತ್ತು ಹತ್ತು ಸರಿಯಾಗಿ ಊಟ ನಿದ್ದೆಯಿಲ್ಲದೆ ಪ್ರಜ್ಞೆ ತಪ್ಪಿ ಮಲಗಿದ್ದಾಳೆ” ಕೌಸಲ್ಯ ರಮೇಶನನ್ನು ಸಮಾಧಾನಪಡಿಸಿದರು. ಅಷ್ಟರಲ್ಲೇ ಡಾಕ್ಟರ್ ವಿಷ್ಣು ಪ್ರವೇಶಿಸಿದರು. “ರಾಮ್ ಹೆಂಡತಿ! ಸೊಸೆ!” ಡಾಕ್ಟರ್ ವಿಷ್ಣು ಆಶ್ಚರ್ಯದಿಂದ ಕೌಸಲ್ಯಾರತ್ತ ನೋಡಿದರು. ಪೂರ್ಣಾಳನ್ನು ಪರೀಕ್ಷಿಸಿದ ನಂತರ ಅವರು ಹೊರಬಂದರು. “ಡಾಕ್ಟರ್ ಅವಳಿಗೇನು ಆಗಿಲ್ಲ ಅಲ್ವಾ? ಈಗಲೇ ಸಾಕಷ್ಟು ನೋವು ತಿಂದಿರೋ ಜೀವ ಅದು” ರಮೇಶ್ ಆತಂಕದಿಂದ ಕೇಳಿದ. ಡಾಕ್ಟರ್ ವಿಷ್ಣು ರಮೇಶನನ್ನು ಗಮನಿಸಿ “ಇವರು?” ಎಂದು ರಾಮನತ್ತ ಮುಖ ಮಾಡಿದರು. “ಇವರು ನಿಮ್ಮ ಪೇಷಂಟ್‌ನ ಅಣ್ಣ ಅಂದ್ರೆ ನನ್ನ ಸ್ನೇಹಿತ ರಮೇಶ್” ರಾಮ ಹೆಮ್ಮೆಯಿಂದ ಹೇಳಿದ. “ನೋ ನೀಡ್ ಟು ವರಿ ಮ್ಯಾನ್ ಶೀ ಈಸ್ ಫೈನ್ ನೌ. ಅವರಿಗೆ ಭಯದಿಂದ ಲೋ ಬಿಪಿ ಆಗಿದೆ. ಈ ವಿಷಯಾನ ಮನಸು ತುಂಬ ಹಚ್ಕೊಂಡಿದಾರೆ ಅಂತ ಕಾಣ್ಸುತ್ತೆ. ಈ ಘಟನೆ ನಡೆಯೋಕು ಮುಂಚೆ ಅವರು ಆರೋಗ್ಯವಾಗೇ ಇದ್ರಾ ಅಥವಾ ಏನಾದ್ರೂ ಸಮಸ್ಯೆ ಇತ್ತ?” ರಮೇಶ್ ತಂಗಿಯ ನೆನಪಿನ ಶಕ್ತಿ ಕಳೆದುಕೊಂಡಿದ್ದ ವಿಷಯವನ್ನು ವಿವರಿಸಿದ. “ಇಷ್ಟೆಲ್ಲಾ ನಡೆದಿದ್ಯಾ? ಇದು ಕಾಂಪ್ಲಿಕೇಟೆಡ್ ಕೇಸ್ ಥರಾನೇ ಕಾಣುತ್ತೆ. ಫ್ರೀ ಇದ್ದಾಗ ನೀವು ಮತ್ತೆ ರಾಮ ಹಾಸ್ಪಿಟಲ್ ಕಡೆಗೆ ಬನ್ನಿ ಅವರ ಬಗ್ಗೆ ಸ್ವಲ್ಪ ಮಾತಾಡಬೇಕು” ಡಾಕ್ಟರ್ ವಿಷ್ಣು ಗಂಭೀರವಾಗಿ ಹೇಳಿದರು. ರಮೇಶ್ ಮತ್ತು ರಾಮ ಇಬ್ಬರೂ ಆತಂಕಕ್ಕೊಳಗಾದರು. ಪೂರ್ಣಾಳ ಗತಕಾಲದ ನೆನಪುಗಳು ಈ ಅನಿರೀಕ್ಷಿತ ಮದುವೆಯ ಮೇಲೆ ಯಾವ ಪರಿಣಾಮ ಬೀರಬಹುದು? ಅವಳ ಮರೆತುಹೋದ ಜೀವನದಲ್ಲಿ ಅಡಗಿರುವ ರಹಸ್ಯಗಳೇನು?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಅವನೋ ಹುಟ್ಟು ಒರಟ , ,ತನ್ನ ಕೋಪ ಒರಟುತನದಿಂದ ತನ್ನವರಿಂದಲೇ ತಿರಸ್ಕರಿಸಲ್ಪಟ್ಟ ಮಹಾನ್ ಕೋಪಿಷ್ಟ . ಅವಳೊ ತನ್ನ ಗತ ಜೀವನವನ್ನೇ ಮರೆತು ತ....

     ಭೂಮಿ ಧಡೆಲ್ ಎಂದು ಸಿಡಿದು ಹೋಗುತ್ತೆ! ಪ್ರೊಫೆಸರ್ ಅಯೋಮಯಂ ತನ್ನ ಟೀ ಕಪ್ಪನ್ನು ಕಲಕುತ್ತಾ ರಮಣನತ್ತ ನಿರ್ಭಾವುಕವಾಗಿ ನೋಡಿದರು. ನೋಡಪ್ಪ ಸ...
06/06/2026


ಭೂಮಿ ಧಡೆಲ್ ಎಂದು ಸಿಡಿದು ಹೋಗುತ್ತೆ! ಪ್ರೊಫೆಸರ್ ಅಯೋಮಯಂ ತನ್ನ ಟೀ ಕಪ್ಪನ್ನು ಕಲಕುತ್ತಾ ರಮಣನತ್ತ ನಿರ್ಭಾವುಕವಾಗಿ ನೋಡಿದರು. ನೋಡಪ್ಪ ಸಪ್ಲೈಯರ್ ಇದರಲ್ಲೂ ಷುಗರ್ ಕಡಿಮೇನೆ ಇದೆ. ರಮಣನಿಗೆ ಒಂದು ಕ್ಷಣ ಏನೂ ಅರ್ಥವಾಗಲಿಲ್ಲ. ತನ್ನ ಇಪ್ಪತ್ತಾರನೇ ಸಂದರ್ಶನದಲ್ಲಿ ಸೋತು ಮಾಲತಿಯ ತಂದೆಯ ತಿರಸ್ಕಾರಕ್ಕೆ ಗುರಿಯಾಗಿ ಕೊನೆಗೆ ಈ ಹುಚ್ಚು ಪ್ರೊಫೆಸರನ ಬಳಿ ಆಕಾಶ ನೋಡುವ ಕೆಲಸಕ್ಕೆ ಸೇರಿದ್ದ ರಮಣನಿಗೆ ಈ ಮಾತು ನಂಬಲಾಗಲಿಲ್ಲ. ಕಾಕಾ ಹೊಟೇಲಿನ ಮೂಲೆಯಲ್ಲಿ ಕುಳಿತು ತನ್ನ ಜೇಬಿನಲ್ಲಿದ್ದ ಎಂಟಾಣೆಯನ್ನು ನೆನೆದು ಅವನು ಕಣ್ಣೀರು ಹಾಕುತ್ತಿದ್ದಾಗ ಈ ವೃದ್ಧ ತನ್ನ ಪಕ್ಕದಲ್ಲಿ ಬಂದು ಕುಳಿತು ನೀನ್ಯಾಕೆ ನನ್ಹತ್ರ ನೌಕ್ರಿ ಮಾಡಕೂಡ್ದು? ಎಂದು ಕೇಳಿದ್ದರು. ಆಕಾಶ ನೋಡುವ ಕೆಲಸಕ್ಕೆ ಸಾವಿರ ರೂಪಾಯಿ ಸಂಬಳ ಕೇಳಿದಾಗ ನೋಬೆಲ್ ಪ್ರೈಜ್ ಬಂದ ತಕ್ಷಣ ಕೊಡ್ತೀನಿ ಎಂದಿದ್ದರು. ಹಾಗಾದ್ರೆ ನಾವೆಲ್ಲ ಸತ್ತು ಹೋಗ್ತೀವಾ ಪ್ರೊಫೆಸರ್! ರಮಣನ ದನಿ ನಡುಗಿತ್ತು. ಖಚಿತವಾಗಿ ಈಗಲೇ ಹೇಳಲಾರೆ ಪ್ರೊಫೆಸರ್ ಎಂದಿನಂತೆ ಶಾಂತವಾಗಿ ಉತ್ತರಿಸಿದರು. ಆದರೆ ಆಗಸ್ಟ್ ಹದಿನೇಳು ಹಗಲು ಹನ್ನೊಂದು ಗಂಟೆ ಹತ್ತು ನಿಮಿಷ ಮೂರು ಸೆಕೆಂಡ್‌ವರೆಗೂ ಆ ನಕ್ಷತ್ರದ ಅಯಸ್ಕಾಂತದ ಪ್ರಭಾವ ಭೂಮಿಯ ಮೇಲೆ ಬೀಳುತ್ತೆ. ರಮಣನಿಗೆ ನೆನಪಾಯಿತು ಕಳೆದ ಕೆಲವು ದಿನಗಳಿಂದ ಟೆಲಿಸ್ಕೋಪ್‌ನಲ್ಲಿ ಕಾಣುತ್ತಿದ್ದ ಚೆಂಡಿನಂತಹ ವಸ್ತು ದಿನದಿಂದ ದಿನಕ್ಕೆ ದೊಡ್ಡದಾಗುತ್ತಾ ವೇಗವಾಗಿ ಉತ್ತರದೆಡೆಗೆ ಸಾಗುತ್ತಿತ್ತು. ಪ್ರೊಫೆಸರ್ ಅದನ್ನು ಪ್ರಾಕ್ಸಿಮಾ ಸೆಂಕ್ಚುವರೀ ಎಂದು ಗುರುತಿಸಿದ್ದರು. ಸುಮಾರು ಒಂದು ತಿಂಗಳ ಮುಂಚೇನೇ ಎಲ್ಲಾ ಅಬ್ಸರ್ವೇಟರೀಸ್ ಮುಚ್ಚಿ ಹಾಕಿಸಿದ್ದಾರಂತೆ ಪ್ರೊಫೆಸರ್ ಕಣ್ಣುಮುಚ್ಚಿ ಹೇಳಿದರು. ಯಾರೋ ಈ ಸತ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದಾರೆ. ಅದೇ ಹೊತ್ತಿಗೆ ಅಮೆರಿಕಾದ ಅಧ್ಯಕ್ಷರ ಪ್ರಥಮ ಕಾರ್ಯದರ್ಶಿ ಜೇಮ್ಸ್ ಮೆಕ್ ಡೊನಾಲ್ಡ್ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಸೋವಿಯತ್ ರಷ್ಯಾದ ಕಮ್ಯುನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿ ಬೋರಿನ್ ಎಫ್. ಕಾಸ್ಟಿ ನೋವಾರನ್ನು ಕಂಡಾಗ ವಿಭ್ರಾಂತನಾಗಿದ್ದ. ಭಾರತದ ಪ್ರಧಾನಿ ಜಗದೀಶ್‌ಚಂದ್ರರ ಮನೆಯಲ್ಲಿ ಬಂಡೆಗಲ್ಲು ತಾನಾಗಿಯೇ ಮೇಲೆದ್ದು ಬಿದ್ದಿತ್ತು. ರಾಜಯ್ಯನಂತಹ ಬಡ ರೈತರು ತಮ್ಮ ಭೂಮಿಯನ್ನು ಕಳೆದುಕೊಂಡು ವ್ಯವಸ್ಥೆಯ ವಿರುದ್ಧ ಪ್ರಳಯ ಬರಲಿ ಎಂದು ಶಪಿಸುತ್ತಿದ್ದರು. ರಮಣನಿಗೆ ಪತ್ರಿಕಾ ಕಚೇರಿಯಲ್ಲಿ ಕೆಲಸ ಸಿಕ್ಕಿತ್ತು ಶೈಲಜಳ ಉಪಾಯದಿಂದ. ಆದರೆ ಈ ಪ್ರಳಯದ ಭವಿಷ್ಯದ ನಡುವೆ ಆ ಕೆಲಸಕ್ಕೇನು ಬೆಲೆ? ಮಾಲತಿಯೊಂದಿಗಿನ ಅವನ ಕನಸುಗಳು ನನಸಾಗುವುದೇ? ಅಥವಾ ಆಗಸ್ಟ್ ಹದಿನೇಳು ಹನ್ನೊಂದು ಗಂಟೆ ಹತ್ತು ನಿಮಿಷ ಮೂರು ಸೆಕೆಂಡ್‌ಗೆ ಎಲ್ಲವೂ ಅಂತ್ಯವಾಗುವುದೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

1. ಅಧ್ಯಾಯ ಇಂಡಿಯನ್ ಟೈಮ್ಸ್ ಪತ್ರಿಕಾ ಕಾರ್ಯಾಲಯದ ಎರಡನೇ ಅಂತಸ್ತಿನ ಬಲಗಡೆಯ ಹಾಲ್‍ನಲ್ಲಿ ಟೇಬಲ್ ಮೇಲಿರುವ ಒಂದು ಸಣ್ಣ ಕಾಗದದ ಚೂರನ್....

     ಕಂಗಳು ತುಂಬಾ ತುಂಬಿಕೊಂಡ ನೀರು ಸರ್ರನೆ ಕಣ್ಣಿನಿಂದ ಜಾರಿತು. ಕಣ್ಣೀರು ಸುರಿಸುತ್ತಿರುವ ಕಂಗಳ ಮುಂದೆ ಮತ್ತದೆ ಬಿಳಿಯ ಬಣ್ಣದ ಸೀಲಿಂಗ್.......
06/06/2026


ಕಂಗಳು ತುಂಬಾ ತುಂಬಿಕೊಂಡ ನೀರು ಸರ್ರನೆ ಕಣ್ಣಿನಿಂದ ಜಾರಿತು. ಕಣ್ಣೀರು ಸುರಿಸುತ್ತಿರುವ ಕಂಗಳ ಮುಂದೆ ಮತ್ತದೆ ಬಿಳಿಯ ಬಣ್ಣದ ಸೀಲಿಂಗ್.....!

'ತನ್ನ ಬದುಕು ಸಹ ಇನ್ನು ಮುಂದೆ ಹೀಗೆನಾ...!? ಬಣ್ಣ ರಹಿತ....!? ಒಂದು ಸಣ್ಣ ತಪ್ಪು ತನ್ನನ್ನು ತಂದು ಎಲ್ಲಿಗೆ ನಿಲ್ಲಿಸಿತು...!?
ಮುಂದೇನು...!?' ಆಸ್ಪತ್ರೆಯ ಬೆಡ್ ಮೇಲೆ ಮಲಗಿದ ಜಾಹ್ನವಿ ಚಿಂತಿಸುತ್ತಿರುವಾಗ ರೂಮಿನ ಬಾಗಿಲು ತೆರೆಯಿತು.

ಬಾಗಿಲು ತೆರೆಯುವ ಶಬ್ದ ಕಿವಿಗೆ ಬಿದ್ದರೂ ಆ ಕಡೆ ದೃಷ್ಟಿ ಹರಿಸದ ಜಾಹ್ನವಿ ಇನ್ನೂ ಸಹ ಸೀಲಿಂಗನ್ನೆ ದಿಟ್ಟಿಸುತ್ತಿದ್ದಳು.

ಅತ್ತು ಅತ್ತು ಅವಳ ಕಂಗಳು ಕೆಂಪಗಾಗಿದ್ದು ಕಂಗಳ ಎವೆಗಳು ಉಬ್ಬಿಕೊಂಡಿದ್ದವು. ಮುಖದ ಖಳೆ ಕಳೆದುಕೊಂಡಿದ್ದು ತುಟಿಗಳ ರಂಗು ಬಿಳಿಯ ಬಣ್ಣಕ್ಕೆ ತಿರುಗಿದ್ದವು.

ಬಾಗಿಲು ತೆರೆದು ಒಳಗೆ ಬಂದ ಅವಳಮ್ಮ ಸಾವಿತ್ರಿಯವರು ಮೆಲ್ಲಗೆ ಬಂದು ಬೆಡ್ ಮುಂದೆ ಇರುವ ಸ್ಟೂಲ್ ಮೇಲೆ ಕುಳಿತು ಮಗಳ ಕೖಯ ಮೇಲೆ ಕೖಯಿಟ್ಟರು.

ಅಮ್ಮನ ಹೃದಯದ ಮೃದುತ್ವ ಮಗಳಿಗಾಗಿ ಅವರಲ್ಲಿರುವ ಕನಿಕರ ತನ್ನ ಕೖಯ ಮೇಲಿನ ಅವರ ನಾಜೂಕು ಹಿಡಿತವೆ ಗೊತ್ತು ಮಾಡಿಸುತಿತ್ತು.

ಅವರು ಕೖಯಿಟ್ಟ ತಕ್ಷಣ ಒಂದು ದೀರ್ಘ ಉಸಿರೆಳೆದುಕೊಂಡವಳು ತನ್ನ ಇನ್ನೊಂದು ಕೖಯನ್ನು ಮೆಲ್ಲಗೆ ತನ್ನ ಹೊಟ್ಟೆಯ ಮೇಲಿಟ್ಟುಕೊಂಡಳು.

ಇತ್ತ ಮಗಳ ಕಣ್ಣೀರು, ಹತಾಶಯ, ಚಿಂತೆ ನೋಡಿದ ತಾಯಿಯ ಜೀವ ಕುಗ್ಗದೆ ಇರುತ್ತದೆಯೆ...!? ಅವರ ಕಂಗಳಿಂದಲೂ ಕಣ್ಣೀರ ಹನಿಗಳು ಧಾರಾಕಾರವಾಗಿ ಹರಿಯುತಿದ್ದು ಮೆಲ್ಲಗೆ ಬಿಕ್ಕುತ್ತಿದ್ದರು.

ಮಗಳ ಮದುವೆಯ ಕನಸು ಕಾಣುತ್ತಿರುವ ಕಂಗಳಿಗೆ ಕಣ್ಣೀರಿನ ಉಡುಗೊರೆ ಕೊಟ್ಟ ಮಗಳನ್ನು ಕ್ಷಮಿಸುವುದು ಹೇಗೆ...!? ಆದರೂ ತಾಯಿಯ ಮನಸ್ಸು ಕೇಳದೆ ಮಗಳನ್ನು ಕೊನೆಯ ಬಾರಿ ಭೇಟಿಯಾಗಲು ಬಂದಿದ್ದರು.

ಒಂದು ಮಾತನ್ನು ಸಹ ಆಡದೆ ಕುಳಿತು ಕಣ್ಣೀರಿಡುತ್ತಿರುವ ತಾಯಿಯ ಕಡೆಗೆ ಜಾಹ್ನವಿ ಕೂಡ ದೃಷ್ಟಿ ಹರಿಸಲಿಲ್ಲ. ಎಲ್ಲಾ ಮೋಹ, ಮಮಕಾರ ಮರೆತೆ ತಾನೆ ಜಾಹ್ನವಿ ತನ್ನ ಪ್ರಾಣವನ್ನು ತೆಗೆದುಕೊಳ್ಳಲು ಪ್ರಯತ್ನಿಸಿದ್ದು....!? ಈಗ ಅದು ಕೂಡ ವಿಫಲವಾಯಿತು. ಬಹುಶಃ ಆ ದೇವರ ಯೋಜನೆ ಬೇರೆಯದೆ ಇದೆ ಅನಿಸುತ್ತೆ!

ಅಳುತ್ತ ಕುಳಿತ ತಾಯಿಯ ಕಣ್ಣೀರಿಗಿಂತ ನೋವು ಕೊಡುವ ಸಂಗತಿ ಮನವನ್ನು ಹಿಂಡುತ್ತಿರುವಾಗ ಜಾಹ್ನವಿಗೆ ಈಗ ತನ್ನವರ ಪರವೆ ಇರಲಿಲ್ಲ.

"ಸಾವಿತ್ರಿ....! ಲೆ ಸಾವಿತ್ರಿ.....! ಬರ್ತಿಯೊ ಅಥವಾ ಮಗಳ ಜೊತೆ ನೀನು ಸತ್ತಿದ್ದಿಯಾ ಅಂತ ತಿಳಿಯಬೇಕಾ....!? " ಎಂದು ಹೊರಗಿನಿಂದ ಬಂದ ಗಡುಸು ಧ್ವನಿಯ ವಾರ್ನಿಂಗ್ ಕೇಳಿ ಬಂದಾಗ ಸಾವಿತ್ರಿಯವರು ಮತ್ತಷ್ಟು ಬಿಕ್ಕಿ ಬಿಕ್ಕಿ ಅತ್ತರು.

ಅಳುತ್ತ, " ಜಾನು...! ಯಾಕೆ ಈ ಹಠ...!? ಅಪ್ಪನ ಮಾತು ಕೇಳಬಾರದಾ...!? ಈ ಪಾಪದ ಪಿಂ.....!" ಅವರ ಮಾತು ಮುಗಿಯುವ ಮುನ್ನವೆ ಜಾಹ್ನವಿಯ ಕಾಸಗಲ ಕಂಗಳು ತಾಯಿಯ ಕಡೆಗೆ ಕೆಂಡ ಕಾರಿದವು. ಮಗಳ ಕಂಗಳ ಬೆಂಕಿಗೆ ಹೆದರಿದ ಸಾವಿತ್ರಿಯವರು ಬಾಯಿಗೆ ಸೆರಗನ್ನು ಅಡ್ಡ ಹಿಡಿದು ಅಳುತ್ತ ಹೊರಗೆ ಓಡಿದರು.

ಅಮ್ಮ ಹೋದ ನಂತರ ಮತ್ತೆ ಸೀಲಿಂಗ್ ಕಡೆಗೆ ದೃಷ್ಟಿ ಹರಿಸಿದ ಜಾಹ್ನವಿ ತನ್ನ ದುಃಖವನ್ನು ಇನ್ನಷ್ಟು ಹಿಡಿದಿಡಲು ವಿಫಲಗೊಂಡು ಬಿಕ್ಕಿ ಬಿಕ್ಕಿ ಅಳಲು ಆರಂಭಿಸಿದಳು. ಅದೆಷ್ಟು ಧ್ವನಿ ಹೊರಹಾಕಿ ಅತ್ತರು ಸಮಾಧಾನವಾಗದು. ದುಃಖದ ಅಲೆಗಳು ಹೆಚ್ಚಾಗುತ್ತಿದ್ದಂತೆ ಅವಳ ದುಃಖದ ಧ್ವನಿ ಸಹ ಆಸ್ಪತ್ರೆಯನ್ನು ನಡುಗಿಸುವಷ್ಟು ಹೆಚ್ಚಾಯಿತು. ಅವಳ ಅಳುವಿಗೆ ಓಡಿ ಬಂದ ಇಬ್ಬರು ನರ್ಸ್ ಗಳು ಅವಳನ್ನು ಎಷ್ಟೆ ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಅತ್ತು ಅತ್ತು ಸುಸ್ತಾದ ಜಾಹ್ನವಿಯ ಧ್ವನಿ ಅಡಗಿದ್ದು ಅವಳು ಪ್ರಜ್ಞೆ ತಪ್ಪಿದಾಗ....!
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಕಂಗಳು ತುಂಬಾ ತುಂಬಿಕೊಂಡ ನೀರು ಸರ್ರನೆ ಕಣ್ಣಿನಿಂದ ಜಾರಿತು. ಕಣ್ಣೀರು ಸುರಿಸುತ್ತಿರುವ ಕಂಗಳ ಮುಂದೆ ಮತ್ತದೆ ಬಿಳಿಯ ಬಣ್ಣದ ಸೀಲಿಂಗ...

     “ಮಂತ್ರ ಎಷ್ಟು ಸುಳ್ಳು ಹೇಳ್ತೀಯಾ ನೀನು? ನಾವು ಕೂಡ ಹುಡುಗಿಯರೇ ನಮಗೂ ಗೊತ್ತಾಗತ್ತೆ ನೀನು ಪ್ರತಿ ತಿಂಗಳು ಇದೇ ದಿನಕ್ಕೆ ಕಾಲೇಜಿಗೆ ಯಾಕೆ ...
06/06/2026


“ಮಂತ್ರ ಎಷ್ಟು ಸುಳ್ಳು ಹೇಳ್ತೀಯಾ ನೀನು? ನಾವು ಕೂಡ ಹುಡುಗಿಯರೇ ನಮಗೂ ಗೊತ್ತಾಗತ್ತೆ ನೀನು ಪ್ರತಿ ತಿಂಗಳು ಇದೇ ದಿನಕ್ಕೆ ಕಾಲೇಜಿಗೆ ಯಾಕೆ ಬರಲ್ಲ ಅಂತ.” ಸಮೃದ್ಧಿಯ ಮಾತು ತರಗತಿಯ ನಿಶ್ಯಬ್ಧವನ್ನು ಛಿದ್ರಗೊಳಿಸಿತು. ಕಿಟಕಿಯ ಬಳಿ ನಿಂತಿದ್ದ ಹುಡುಗರ ಗುಂಪು ಗಹಗಹಿಸಿ ನಕ್ಕಾಗ ಮಂತ್ರಳ ಮುಖ ಕೆಂಪಾಯಿತು. ಅವಳ ಕಣ್ಣುಗಳು ತಕ್ಷಣವೇ ತುಂಬಿಕೊಂಡವು. ಮೂರು ದಿನಗಳ ಕಾಲ ಮನೆಯ ಹಿತ್ತಲಿನಲ್ಲಿ ಎಲ್ಲರಿಂದ ದೂರ ‘ಮೂರು ದಿನದ ನೀರು’ ಎಂಬ ಸಂಪ್ರದಾಯದ ಹೆಸರಿನಲ್ಲಿ ಕಳೆಯಬೇಕಾದ ಕಹಿ ವಾಸ್ತವ ಅವಳನ್ನು ಮತ್ತಷ್ಟು ಕುಗ್ಗಿಸಿತು. “ಇಟ್ಸ್ ಕಾಮನ್ ಮ್ಯಾಟರ್ ಡೋಂಟ್ ಗೆಟ್ ಅಪ್ಸೆಟ್” ಸಮೃದ್ಧಿ ಹೇಳಿದಳು ಆದರೆ ಮಂತ್ರಳಿಗೆ ಅದು ಸಾಮಾನ್ಯ ವಿಷಯವಾಗಿರಲಿಲ್ಲ. ಅದು ಅವಳನ್ನು ಬಂಧಿಸಿದ್ದ ಸಂಕೋಲೆ. “ಅಮ್ಮ ನಿನ್ನ ಮೈದುನನನ್ನು ‘ಜೊಲ್ಲು ಸುರುಕ’ ಅಂತ ಹೇಳಿದ್ರೆ...” ಎಂದು ಅಕ್ಕ ಮಾನಸಳೊಂದಿಗೆ ಸಿಟ್ಟಿನಿಂದಲೇ ಹೇಳಿದ್ದಳು. ಮಾನಸ ಮತ್ತು ಅವಳ ಗಂಡ ನಚಿಕೇತ ಮಂತ್ರಳ ಓದು ಮುಗಿದ ಕೂಡಲೇ ನಚಿಕೇತನ ತಮ್ಮ ನಕುಲ್‌ನೊಂದಿಗೆ ಮದುವೆ ಮಾಡುವ ಪ್ರಸ್ತಾಪವನ್ನು ತಂದಿದ್ದರು. ತಂದೆ ದತ್ತಾತ್ರೇಯ ಆರಂಭದಲ್ಲಿ ಹಿಂಜರಿದರೂ ದಿನೇ ದಿನೇ ಕುಸಿಯುತ್ತಿರುವ ಕಿರಾಣಿ ಅಂಗಡಿಯ ಆದಾಯದ ಮುಂದೆ ಮಗಳ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದರು. “ಮಂತ್ರ ಮದುವೆ ಅಂದ ಕೂಡಲೇ ಆಗಿಯೇ ಹೋಗುವುದಿಲ್ಲ. ಆದರೆ ನಾಳೆ ಅಂತಹ ಸಂದರ್ಭ ಬಂದರೆ ನೀನು ಸಿದ್ಧವಾಗಿರಬೇಕು” ಎಂದು ತಾಯಿ ಅರುಂಧತಿ ಕಳೆದ ರಾತ್ರಿ ಪಿಸುಗುಟ್ಟಿದ್ದರು. “ನಿಮ್ಮಪ್ಪ ನಿಮಗೆ ಇಷ್ಟು ವಿದ್ಯೆ ಕೊಡಿಸೋಕೆ ಅದೆಷ್ಟು ಕಷ್ಟ ಪಟ್ಟಿದ್ದಾರೆ ಅಂತ ಗೊತ್ತಾ? ಇತ್ತೀಚೆಗೆ ಅಂಗಡಿಯಲ್ಲಿ ವ್ಯಾಪಾರವೂ ಕಡಿಮೆ ಇದೆ.” ತಾಯಿಯ ಮಾತುಗಳು ಕುಟುಂಬದ ಆರ್ಥಿಕ ಸಂಕಷ್ಟದ ಕಠೋರ ಸತ್ಯವನ್ನು ಅನಾವರಣಗೊಳಿಸಿದವು. ಮಂತ್ರಳ ಕನಸುಗಳು ಅವಳ ಸ್ವಾತಂತ್ರ್ಯದ ಆಸೆ ಈ ಸಂಪ್ರದಾಯ ಮತ್ತು ಬಡತನದ ನಡುವೆ ಸಿಕ್ಕಿಹಾಕಿಕೊಂಡಿತ್ತೇ? ಅವಳ ಭವಿಷ್ಯದ ದಾರಿ ಯಾವುದು?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಮಂತ್ರ... ಮಂತ್ರ ಇನ್ನೂ ತಯಾರಾಗಿಲ್ವೇನೇ? ಕಾಲೇಜಿಗೆ ಹೋಗೋಕೆ ಟೈಮ್ ಆಯ್ತು ಎಂದು ಕೂಗುತ್ತಾ ಗೇಟ್ ದೂಡಿ ಒಳ ಬಂದಳು ಮಂತ್ರಾಳ ಗೆಳತಿ ಸುಗ....

     ಧೋ...... ಎಂದು ಸುರಿಯುವ ಮಳೆ.. ನಿಮಿಷದಿಂದ ನಿಮಿಷಕ್ಕೆ ಅದರ ಆರ್ಭಟ ಹೆಚ್ಚಾಗುತ್ತಿತ್ತೆ ವಿನಹ ಕಡಿಮೆ ಆಗುವ ಯಾವ ಲಕ್ಷಣ ಇರಲಿಲ್ಲ.. ಆಗಾಗ...
06/06/2026


ಧೋ...... ಎಂದು ಸುರಿಯುವ ಮಳೆ.. ನಿಮಿಷದಿಂದ ನಿಮಿಷಕ್ಕೆ ಅದರ ಆರ್ಭಟ ಹೆಚ್ಚಾಗುತ್ತಿತ್ತೆ ವಿನಹ ಕಡಿಮೆ ಆಗುವ ಯಾವ ಲಕ್ಷಣ ಇರಲಿಲ್ಲ.. ಆಗಾಗ ಭಯ ಪಡಿಸುವ ಗುಡುಗು ಸಿಡಿಲಿನ ಆರ್ಭಟ.... ಭೀತಿ ತರಿಸುವ ಈ ಮಳೆಯಲ್ಲಿ ಪೂರ್ತಿಯಾಗಿ ನೇನೆದಿದ್ದರೂ ಕೂಡಾ, ಅವನ ಕಾಲ ಬಳಿಯಲ್ಲಿ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.. ಆದರೆ ಅವನು ತನಗೆ ಇದಕ್ಕೆ ಯಾವುದೇ ಸಂಭಂದ ಇಲ್ಲವೆಂದು ಸುಮ್ಮನೆ ಕಾರಿಗೆ ಒರಗಿ ನಿಂತಿದ್ದ...

" ಪ್ಲೀಸ್ ವಿಜು ನೀನು ಅಂದುಕೊಂಡ ಹಾಗೆ ನಮ್ಮಿಬ್ಬರ ನಡುವೆ ಯಾವುದೇ ಸಂಭಂದ ಇಲ್ಲಾ... ಅವನು ನನಗೆ ಒಬ್ಬ ಒಳ್ಳೆಯ ಸ್ನೇಹಿತ ಅಷ್ಟೆ.. ಅದಕ್ಕಿಂತ ಹೆಚ್ಚಾಗಿ ನಮ್ಮಿಬ್ಬರ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ " ಎಂದು ಅವಳು ಪರಿ ಪರಿಯಾಗಿ ಬೇಡಿಕೊಳ್ಳುತ್ತಾ ಇದ್ದರೂ ಅವನದು ಮತ್ತದೇ ವ್ಯಂಗ್ಯ ನಗು..

" ನಿನ್ನ ಕಣ್ಣಿಗೆ ನಾನು ಗುಗ್ಗು ರೀತಿ ಕಾಣುತ್ತಾ ಇದ್ದಿನಾ? ನಿನ್ನ ಹಿಂದಿನ ಜೀವನದ ಎಲ್ಲಾ ವಿಷಯವನ್ನು ಬಚ್ಚಿಟ್ಟು ನನ್ನನ್ನು ಮದುವೆ ಆಗಿದ್ದು ಅಲ್ಲದೆ, ನನ್ನ ಪವಿತ್ರ ಪ್ರೀತಿಗೆ ಮೋಸ ಮಾಡಿದ ನಿನ್ನನ್ನು ಕ್ಷಮಿಸುವೆ ಅಂತ ಕನಸಿನಲ್ಲಿ ಕೂಡಾ ಯೋಚನೆ ಮಾಡಬೇಡ.. " ಎಂದು ಅವಳ ಮುಡಿಯನ್ನು ಹಿಡಿದು ಎತ್ತಿ ತನ್ನ ಮುಖದ ಬಳಿ ಅವಳ ಮುಖವನ್ನು ತಂದು.. " ಅಲ್ಲಾ ಬೇವಿನ ಮರವನ್ನು ನೆಟ್ಟು ಅದರಲ್ಲಿ ಮಾವು ಬೇಕು ಅಂದರೆ ಸಿಗುತ್ತಾ.. ಹಾಗೆ ನೀನು ಕೂಡಾ.. ಗಾದೆ ಕೆಳಿಲ್ವಾ ತಾಯಿಯಂತೆ ಮಗಳು ನೂಲಿನಂತೆ ಸೀರೆ. ನೀನು ಅಷ್ಟೆ ನಿನ್ನ ತಾಯಿಯ ಹಾಗೆ.. ಛೀ ನಿನ್ನಂತವಳ ಜೊತೆ ಒಂದು ವರ್ಷ ಹೇಗೆ ಸಂಸಾರ ಮಾಡಿದೆನೋ... ಅಬ್ಬಾ ಈಗ ಆದರೂ ನಿನ್ನ ಬಗ್ಗೆ ತಿಳಿದು ಒಳ್ಳೆಯ ಕೆಲಸ ಆಯ್ತು.. ಅಲ್ಲಾ ನಿನ್ನ ತಾಯಿ ಎಷ್ಟು ಸಂಸಾರ ಹಾಳು ಮಾಡಿದ್ದಾಳೆ ಅದೇ ರೀತಿ ನೀನು ಕೂಡಾ ಇನ್ನೆಷ್ಟು ಸಂಸಾರ ಹಾಳು ಮಾಡಬೇಕು ಎಂದು ಪಣ ತೊಟ್ಟಿದ್ದಿಯೋ.. ಅಲ್ಲಾ ನಿನಗೆ ನಾನು ಒಬ್ಬನೇ ಗಂಡಾನಾ ಅಥವಾ ತುಂಬಾ ಜನ ಗಂಡಂದಿರು ಅಂತ ಇದ್ದಾರಾ...!? " ಎಂದು ಅವನು ಹೇಳಿ ಮುಗಿಸುವುದರ ಒಳಗೆ ಅವನ ಕೆನ್ನೆಗೆ ಹೊಡೆಯುವಳು.. ಅವಳ ಈ ರೀತಿಯ ವರ್ತನೆ ನಿರೀಕ್ಷಿಸಿರದ ವಿಜ್ಞಾನ್ ಒಂದು ಕೈ ಕೆನ್ನೆಯ ಮೇಲೆ ಇಟ್ಟುಕೊಂಡು ಉರಿಗಣ್ಣಿನಿಂದ ಕೆಕ್ಕರಿಸಿ ನೋಡುವನು...
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಧೋ...... ಎಂದು ಸುರಿಯುವ ಮಳೆ.. ನಿಮಿಷದಿಂದ ನಿಮಿಷಕ್ಕೆ ಅದರ ಆರ್ಭಟ ಹೆಚ್ಚಾಗುತ್ತಿತ್ತೆ ವಿನಹ ಕಡಿಮೆ ಆಗುವ ಯಾವ ಲಕ್ಷಣ ಇರಲಿಲ್ಲ.. ಆಗಾಗ ಭ....

     "ಪ್ರೇರಣಾ........ ಎದ್ದೇಳು ಟೈಂ ಆಯ್ತು......" ಎಂದು ಕೂಗುತ್ತಾ ಬಂದ ವಿಶಾಲಾಕ್ಷಿ ಅವರನ್ನು ನೊಡಿ ಪ್ರೇರಣಾ , "ಅಮ್ಮ ಯಾಕೆ ಹಾಗೆ ಕೂಗ್ತ...
05/06/2026


"ಪ್ರೇರಣಾ........ ಎದ್ದೇಳು ಟೈಂ ಆಯ್ತು......" ಎಂದು ಕೂಗುತ್ತಾ ಬಂದ ವಿಶಾಲಾಕ್ಷಿ ಅವರನ್ನು ನೊಡಿ ಪ್ರೇರಣಾ ,

"ಅಮ್ಮ ಯಾಕೆ ಹಾಗೆ ಕೂಗ್ತಾ ಇದೀಯಾ,...... " ಎಂದಳು ಕೋಪದಿಂದ.

"ಕಾಲೇಜಿಗೆ ಟೈಂ ಆಯ್ತು ಅಂತ ಎದ್ದೆಳ್ಸೊಕ್ ಬಂದೆ ಕಣೆ..." ಎಂದು ಮಗಳನ್ನು ಉದ್ದೇಶಿಸಿ ನುಡಿದವರ ಮಾತಿಗೆ,

"ಅಮ್ಮ ನಾನು ಆಲ್ರೆಡಿ ಎದ್ದಿದೀನಿ ಹೊಗಿ ಫಸ್ಟ್ ನಿಮ್ ಮುದ್ದಿನ ಮಗಳನ್ನು ಎಬ್ಬಿಸಿ.... " ಎನ್ನುತ್ತಾ ತನ್ನ ಬ್ಯಾಗ್ ಪ್ಯಾಕ್ ಮಾಡತೊಡಗಿದಳು ಪ್ರೇರಣಾ.

ಅವಳ ಮಾತಿಗೆ ಒಮ್ಮೆ ಅವಳನ್ನು ದಿಟ್ಟಿಸಿದವರು, "ಯಾಕೆ ಹಾಗಂತಿಯಾ ನೀವಿಬ್ರೂ ನನ್ನ ಮಕ್ಕಳೆ ನಂಗೆ ಇಬ್ಬರೂ ಒಂದೆ..... ಸರಿ ಸರಿ ನೀನು ರೆಡಿ ಆಗಿ ಬಾ ತಿಂಡಿ ರೆಡಿ ಇದೆ.... " ಎಂದು ಹೇಳಿ ಪ್ರಾರ್ಥನಾಳ ರೂಂ ಕಡೆ ಹೊರಡುತ್ತಾರೆ.

ಇನ್ನು ಮಲಗಿದ್ದ ಮಗಳನ್ನ ನೊಡಿ ಅವಳ ಬ್ಲಾಂಕೆಟ್ ಎಳೆಯುತ್ತಾ......
"ಎದ್ದೇಳೆ ಮೇಲೆ ...... " ಎಂದಾಗ

ಕೋಪದಿಂದ ಅಮ್ಮನನ್ನು ಗುರಾಯಿಸಿದ ಪ್ರಾರ್ಥನಾ, "ಅಮ್ಮ ಯಾಕ್ ಹಾಗ್ ಕೂಗ್ತಿದೀಯಾ...... " ಎಂದಿದ್ದಳು.

"೮ ಗಂಟೆ ಆದ್ರು ಇನ್ನು ಮಲಗಿದಿಯಲ್ಲ.... ಕಾಲೇಜಿಗೆ ಟೈಂ ಆಯ್ತು ಹೊಗಿ ರೆಡಿಯಾಗು........ "

"ಅಮ್ಮ ನಂಗೊತ್ತು ಕಾಲೇಜಿಗೆ ಎಷ್ಟೊತ್ತಿಗೆ ಹೋಗ್ಬೇಕು ಅಂತ..... ನಿಂಗೆ ಎಷ್ಟು ಸಾರಿ ಹೇಳಿದಿನಿ ನನ್ನ ನಿದ್ದೆ ಹಾಳು ಮಾಡ್ಬೇಡ ಅಂತ..... "

"ಎಷ್ಟೆ ಕೊಬ್ಬು ನಿಂಗೆ ಲೇಟ್ ಆಗತ್ತೆ ಅಂತ ಏಳ್ಸೊಕ್ ಬಂದ್ರೆ ನಂಗೆ ಅಂತೀಯ ಏನಾದ್ರೂ ಮಾಡ್ಕೊ ನಿಂಗೆ ನಿಮ್ಮಪ್ಪನ ಮುದ್ದು ಜಾಸ್ತಿ ಆಗಿದೆ. "
ಎಂದು ಬೈಯುತ್ತಾ...... ಅಡುಗೆ ಮನೆ ಸೇರುತ್ತಾರೆ.

ಪ್ರೇರಣಾ ಸ್ನಾನ ಮುಗಿಸಿ ರೆಡಿ ಆಗುತ್ತಿದ್ದಳು.
ಹಸಿರು ಬಣ್ಣದ ಸೆಲ್ವಾರ್ ತೊಟ್ಟು ಕೂದಲಿಗೆ ಸಣ್ಣ ಕ್ಲಿಪ್ ಹಾಕಿದ್ದಳು. ಒಂದು ಕೈಯಲ್ಲಿ ಸಿಂಗಲ್ ಬಳೆ ಮತ್ತೊಂದು ಕೈಯಲ್ಲಿ ವಾಚ್ ತೊಟ್ಟಿದ್ದಳು. ಡ್ರೆಸ್ ಗೆ ಮ್ಯಾಚಿಂಗ್ ಜುಮುಕಿ ಕಣ್ಣಿಗೆ ಗಾಢವಾದ ಕಾಡಿಗೆ ತುಟಿಗೆ ಸ್ವಲ್ಪವೆ ಲಿಪ್ಸ್ಟಿಕ್ ಹಣೆಯಲ್ಲಿ ಚಿಕ್ಕದೊಂದು ಬೊಟ್ಟು. ಅವಳನ್ನು ನೋಡಿದರೆ ಎಂತವರೆ ಆದರೂ "ವಾವ್ಹ್..... " ಎನಿಸುವಷ್ಟು ಮುದ್ದಾಗಿದ್ದಳು.

ಪ್ರೇರಣಾ ಕೆಳಗೆ ಬಂದವಳೆ ಡೈನಿಂಗ್ ಟೇಬಲ್ ನಲ್ಲಿ ಕುಳಿತು " ಅಮ್ಮ ತಿಂಡಿ..." ಎಂದು ಕೂಗುತ್ತಾಳೆ.
ವಿಶಾಲಾಕ್ಷಿ ಬಂದು ಪ್ರೇರಣಾಳಿಗೆ ತಿಂಡಿ ಬಡಿಸುತ್ತಾರೆ.

" ಅಮ್ಮ ಅಪ್ಪ ಎಲ್ಲಿ ಕಾಣಸ್ತಿಲ್ಲ...... "ಎಂದಾಗ ಬಾಗಿಲ ಬಳಿಯಿಂದ

"ಬಂದೆ ಮಗಳೆ..... " ಎಂಬ ಧ್ವನಿಗೆ ತಿರುಗಿ ನೊಡುತ್ತಾಳೆ ವಿಶ್ವನಾಥ್ ರವರು ಆಗ ತಾನೆ ವಾಕಿಂಗ್ ಮುಗಿಸಿ ಬಂದವರು ಕೈ ತೊಳೆದು ತಿಂಡಿಗೆ ಕೂರುತ್ತಾರೆ.

ಎಲ್ಲಿ ನನ್ನ ಇನ್ನೊಬ್ಬ ಮಗಳು ಇನ್ನೂ ಬಂದಿಲ್ವಲ್ಲ ಎಂದಾಗ , "ಬಂದೆ ಅಪ್ಪ..." ಎಂದು ಪ್ರಾರ್ಥನಾ ಬಂದು ಕೂರುತ್ತಾಳೆ.

ಪ್ರಾರ್ಥನಾಳ ಮುಖದಲ್ಲಿದ್ದ ಕೋಪವನ್ನು ಗುರುತಿಸಿದ ವಿಶ್ವನಾಥ್, " ಯಾಕ್ ಮಗಳೆ ಕೊಪ ಮಾಡ್ಕೊಂಡಿದೀಯಾ.... " ಎಂದಾಗ,

"ಅಪ್ಪ ಅಮ್ಮ ದಿನಾ ಬೆಳಗ್ಗೆ ನಂಗೆ ಟಾರ್ಚರ್ ಮಾಡ್ತಾಳೆ... " ಎಂದಿದ್ದಳು ಅಮ್ಮನ ಮೇಲೆ ಕಂಪ್ಲೇಂಟ್ ಹೇಳುವಂತೆ.

ವಿಶಾಲಾಕ್ಷಿ " ನಿಂದು ಯಾಕೊ ಅತಿಯಾಯ್ತು ಕಣೆ.... ಕಾಲೇಜಿಗೆ ಲೇಟ್ ಆಗತ್ತೆ ಅಂತ ಎಬ್ಸೊಕ್ ಬಂದ್ರೆ ಇಲ್ಲದ್ದೆ ಹೇಳ್ತೀಯಾ.... ಎದ್ದಿರೊದೆ ಲೇಟು.... "ಎಂದಾಗ

"" ವಿಶಾಲೂ ಅವಳು ಬೇಗ ಎದ್ದು ಏನ್ ಮಾಡ್ಬೇಕು..... ನೀನು ಸುಮ್ಮನೆ ಅವಳಿಗೆ ಬೈಬೇಡ. " ಎನ್ನುತ್ತಾ ಮಗಳನ್ನು ವಹಿಸಿಕೊಂಡು ಬಂದಿದ್ದರು ವಿಶ್ವನಾಥ್.

ಪತಿಯ ಮಾತಿಗೆ ಕೋಪಗೊಂಡ ವಿಶಾಲಾಕ್ಷಿ, "ನಿಮ್ಮ ಸಪೊರ್ಟಿಂದನೆ ಅವಳು ಹಾಳಾಗ್ತಾ ಇರೊದು ಏನಾದ್ರೂ ಮಾಡ್ಕೊಳಿ. ..... " ಎಂದು ಸುಮ್ಮನಾಗುತ್ತಾರೆ.

ಪ್ರೇರಣಾ, "ಅಪ್ಪ ಯಾಕ್ ಲೇಟು...... "

"ಏನಿಲ್ಲ ಪುಟ್ಟ ಇವತ್ತು ವಾಕಿಂಗ್ ಹೋದಾಗ ನನ್ನ ಫ್ರೆಂಡ್ ಸಿಕ್ಕಿದ್ದ ಅವನ ಜೊತೆ ಮಾತಾಡ್ಕೊಂಡು ಬರೊಹೊತ್ಗೆ ಲೇಟ್ ಆಯ್ತು...... "

"ಸರಿ ನಂಗೆ ಟೈಂ ಆಯ್ತು ಹೊರಡ್ತೀನಿ.... "
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

"ಪ್ರೇರಣಾ........ ಎದ್ದೇಳು ಟೈಂ ಆಯ್ತು......" ಎಂದು ಕೂಗುತ್ತಾ ಬಂದ ವಿಶಾಲಾಕ್ಷಿ ಅವರನ್ನು ನೊಡಿ ಪ್ರೇರಣಾ , "ಅಮ್ಮ ಯಾಕೆ ಹಾಗೆ ಕೂಗ್ತಾ ಇದೀಯಾ,....

     “ಶುನಃಶ್ಯೇಪ” ಏನು ಹೇಳಲಿ ಇವನ ಬಗ್ಗೆ ? ಅವನೊಬ್ಬ ನತದೃಷ್ಟ ಬಾಲಕ. ಹೆತ್ತವರಿದ್ದರೂ ಅವರ ಸಮವಾದ ಪ್ರೀತಿ ಸಿಗದೆ ಬಳಲಿ ಬೆಂಡಾದ ಹಿಡಿ ಪ್ರೀತ...
05/06/2026


“ಶುನಃಶ್ಯೇಪ” ಏನು ಹೇಳಲಿ ಇವನ ಬಗ್ಗೆ ? ಅವನೊಬ್ಬ ನತದೃಷ್ಟ ಬಾಲಕ. ಹೆತ್ತವರಿದ್ದರೂ ಅವರ ಸಮವಾದ ಪ್ರೀತಿ ಸಿಗದೆ ಬಳಲಿ ಬೆಂಡಾದ ಹಿಡಿ ಪ್ರೀತಿಗಾಗಿ ಪರಿತಪಿಸಿದವನು. ಉತ್ತಮವಾದ ಕುಟುಂಬದಲ್ಲಿ ಜನಿಸಿದವನು, ಆದರೂ ಅದೃಷ್ಟ ಮಾತ್ರ ಹುಟ್ಟುತ್ತಲೇ ಶೂನ್ಯ. ಏಕೆಂದರೆ ಅವನು ಮಧ್ಯದ ಸಂತಾನ. ಮೊದಲ ಸಂತಾನ ತಂದೆಯ ಪ್ರೀತಿಗೆ ಹೆಚ್ಚು ಪಾತ್ರವಾದರೆ ಕೊನೆಯ ಸಂತಾನ ತಾಯಿಗೆ ಅತಿ ಮುದ್ದು. ಮಧ್ಯದ ಸಂತಾನಗಳೇ ಹೆತ್ತವರ ಹಿಡಿ ಪ್ರೀತಿಯಲ್ಲೇ ಸುಖ ಕಾಣುವ ನತದೃಷ್ಟ ಅದೃಷ್ಟವಂತರು. ತ್ಯಾಗ , ಬಿಟ್ಟುಕೊಡುವಿಕೆ ಬಂದಾಗಲೆಲ್ಲ ಮಧ್ಯದ ಸಂತಾನಗಳೇ ಮುಂದಾಗಬೇಕು. ಅದನ್ನೇ ಹೆತ್ತವರು ಅಪೇಕ್ಷಿಸುವುದು, ತಮ್ಮ ಮೆಚ್ಚಿನ ಸಂತಾನಗಳಿಗೆ ನೋವಾಗಬಾರದಲ್ಲ. ಮತ್ತೆ ಮಧ್ಯಮ ಸಂತಾನಗಳ ನೋವು ? ಕೇಳುವವರು ಯಾರು ?

ಸತ್ಯ ಹರಿಶ್ಚಂದ್ರ ಮಾಡಿದ ಪ್ರಮಾಣದ ಪ್ರಕಾರ ಮಗ ಹುಟ್ಟಿದ, ಮಗನನ್ನು ಬಲಿ ಕೊಡಬೇಕಿತ್ತು. ಅದನ್ನು ತಪ್ಪಿಸಲು ಹಲವಾರು ಕಾರಣಗಳನ್ನು ಹುಡುಕುತ್ತಲೇ ಬಂದ. ಕೊನೆಗೆ ಬಲಿ ನಡೆಯಲೇ ಬೇಕು ಎಂಬ ಸಂದರ್ಭ ಎದುರಾದಾಗ ಮಗನನ್ನು ಕಳುಹಿಸಿ ಅವನದೇ ವಯಸ್ಸಿನ ಇನ್ನೊಬ್ಬ ಬಾಲಕನನ್ನು ಕರೆದು ತಂದು ಬಲಿಪಶುವಾಗಿಸ ಬಯಸಿದ.

ಆಗ ದೊರೆತ ಬಾಲಕನೇ ಶುನಃಶ್ಯೇಪ, ತಂದೆಯ ಮೆಚ್ಚಿನ ಹಿರಿಯ ಮಗ ತಾಯಿಯ ಮುದ್ದಿನ ಕೊನೆಯ ಮಗನನ್ನು ಹೊರತು ಪಡಿಸಿದರೆ ಸಿಕ್ಕವನು ಸುನಶ್ಯೇಪ. ಅವನನ್ನೇ ಬಲಿಪಶುವಾಗಿ ಕರೆದು ತರುವಾಗ ವಿಶ್ವಾಮಿತ್ರರು ಎದುರಾದರು. ಸುನಶ್ಯೇಪನ ಬಾಡಿದ ಮುಖ ನೋಡಿ ವಿಷಯ ಕೇಳಿದಾಗ ನಡೆದುದನ್ನು ವಿವರಿಸಿದ.

ಅವನ ಬಲಿ ನಡೆಯುವಾಗ ಒಂದು ಮಂತ್ರ ಹೇಳಲು ಹೇಳಿಕೊಟ್ಟರು. ಅಂತೆಯೆ ಶುನಃಶ್ಯೇಪ ತನ್ನ ಬಲಿ ನಡೆಯುವ ಸಮಯದಲ್ಲಿ ಮಂತ್ರವನ್ನು ಪಠಿಸಿದ. ಬಲಿ ನಡೆಯದೆ ಅವನ ಪ್ರಾಣ ಉಳಿಯಿತು, ಸತ್ಯ ಹರಿಶ್ಚಂದ್ರನ ಮಗನೂ ಬಲಿಯ ಪ್ರಮಾಣದಿಂದ ಬದುಕುಳಿದ. ಈ ಸಂದರ್ಭವೇ ಸತ್ಯ ಹರಿಶ್ಚಂದ್ರನ ಮನಃ ಪರಿವರ್ತನೆ ಆಗಲು ಕಾರಣವಾಯಿತು.

ಸತ್ಯ ಸಂಧನಾಗಿ ಸತ್ಯ ಹರಿಶ್ಚಂದ್ರ ಎಂದು ಹೆಸರುವಾಸಿಯಾದ. ಶುನಃಶ್ಯೇಪನ ಮನಸ್ಸು ನೊಂದ ಕಾರಣ ಮತ್ತೊಮ್ಮೆ ತಿರುಗಿ ತನ್ನ ಹೆತ್ತವರ ಬಳಿ ಹೋಗಲು ಮನಸ್ಸು ಮಾಡಲಿಲ್ಲ. ವಿಶ್ವಾಮಿತ್ರರ ಬಳಿಯೇ ಬಂದ, ಅವನನ್ನು ಮನಃಪೂರ್ವಕವಾಗಿ ಮಗನೆಂದು ದತ್ತು ಸ್ವೀಕರಿಸಿದರು. ಅವರ ಮಗನಾಗಿಯೇ ಅವರ ಬಳಿಯೇ ಉಳಿದ ಶುನಃಶ್ಯೇಪ.

ಅವನಿಗೇನೊ ವಿಶ್ವಾಮಿತ್ರರು ತಂದೆಯಾಗಿ ಬಂದು ಕಾಪಾಡಿ ಮಗನಂತೆ ಬೆಳೆಸಿದರು. ಆದರೆ ನನಗೆ ? ನಾನೂ ಮಧ್ಯದ ಸಂತಾನವೇ ನಾನೂ ಆ ಶುನಃಶ್ಯೇಪನಂತೆ ನತದೃಷ್ಟೆ. ಹೆತ್ತವರ ಪ್ರೀತಿ ಸಮವಾಗಿ ಸಿಗಲೇ ಇಲ್ಲ, ತಂದೆ ದೇವರಂತಹವರು. ಹೆಣ್ಣು ಗಂಡೆಂಬ ಭೇದವಿಲ್ಲದೆ ಪ್ರೀತಿಯಿಂದ ಬೆಳೆಸಿದರು. ಎಲ್ಲರನ್ನೂ ಸಮವಾಗಿ ಕಂಡು ಪಿತೃ ಪ್ರೇಮವನ್ನು ಸಮವಾಗಿ ಹಂಚಿದವರು.

ಒಂದು ವರ್ಷದಿಂದ ಹಾಸಿಗೆಯ ಮೇಲೆ ಇರುವರು, ಕೈಕಾಲುಗಳ ಸ್ವಾಧೀನ ಕಳೆದು ಹೋಗಿದೆ. ಅವರು ಮಾಡಿದ ಪುಣ್ಯವೇ ಇಂದು ನಮ್ಮನ್ನು ಉತ್ತಮ ಜೀವನ ನಡೆಸುವಲ್ಲಿ ಸಹಾಯವಾಗಿದೆ. ನಾಲ್ಕು ಜನರ ಮಧ್ಯೆ ಗುರುತಿಸಿಕೊಳ್ಳುವಂತೆ ಆಗುತ್ತಿರುವುದೇ ಅವರು ಮಾಡಿಟ್ಟ ಪುಣ್ಯದಿಂದ. ಹೆತ್ತವರು ಮಕ್ಕಳಿಗಾಗಿ ಆಸ್ತಿ ಮಾಡಿಡದೆ ಹೋದರೂ ಚಿಂತೆಯಿಲ್ಲ , ಪುಣ್ಯ ಒಳ್ಳೆಯತನ ಮತ್ತು ಒಳ್ಳೆಯ ಹೆಸರು ಮಾಡಿಟ್ಟರೆ ಸಾಕು. ಅದೊಂದೆ ಮಕ್ಕಳನ್ನು ಜೀವನ ಪೂರ್ತಿ ಕಾಪಾಡುವುದು.

ನಮ್ಮ ತಂದೆ ಅದೊಂದು ಬಹಳ ಸಂಪಾದನೆ ಮಾಡಿರುವರು. ನಾವು ಐದು ಜನ ಹೆಣ್ಣು ಮಕ್ಕಳು, ಒಬ್ಬನೇ ತಮ್ಮ. ನಾನು ನಾಲ್ಕನೇಯವಳು, ಮೂವರು ಅಕ್ಕ ಒಬ್ಬ ತಂಗಿ ತಮ್ಮ. ತಂಗಿಯೇ ಕೊನೆಯವಳು ಅಮ್ಮನ ಮುದ್ದಿನ ಮಗಳು. ಒಬ್ಬ ಅಕ್ಕನ ಮದುವೆಯಾಗಿದೆ, ಇನ್ಮೊಬ್ಬಳಿಗೆ ಸಂಬಂಧ ನೋಡುತ್ತಿದ್ದೇವೆ.

“ ಲೇ ಆಗಿಂದ ಅದೇನು ಗೀಚ್ತ ಕುತಿದ್ದೀಯ ? ಎದ್ದೇಳೆ ಲೈಟ್ ಆಫ್ ಮಾಡಿ ಸುಮ್ನೆ ಬಿದ್ಕೊ ನಾಳೆ ಕೆಲಸಕ್ಕೆ ಹೋಗೊ ಆಸೆ ಇಲ್ವ ?”

“ ಆಯ್ತು ಇರಮ್ಮ ಸ್ವಲ್ಪ ಹೊತ್ತು ”

“ ಸುಮ್ಮನೆ ಯಾಕ್ ಕರೆಂಟು ಹಾಳು ಮಾಡ್ತೀಯ ? ನೀನು ಚಂದ್ರ ವಂಶದವಂಶದವಳು ಗೊತ್ತು ಆದರೂ ಕರೆಂಟ್ ಬಿಲ್ ಬಾರದೆ ಇರಲಿ ಅಂತ ಎಚ್ಚರಸ್ತಿರೊದು ”

“ ಕರೆಂಟ್ ಬಿಲ್ ಬಂದರೆ ಏನಂತೆ ? ಕಟ್ಟೊಳು ನಾನೇ ತಾನೆ ? ಮತ್ಯಾಕಮ್ಮ ಸುಮ್ಮನೆ ಕಿರುಚಾಡ್ತೀಯ ? ನೀನು ಮಲಕ್ಕೊ ನಾನು ಮಲಗ್ತೀನಿ ” ಎಂದ ಶ್ರೀಪ್ರದ ಹಾಲ್ ನ ದೀಪವಾರಿಸಿ ಕೋಣೆಗೆ ಹೊರಟಳು.

“ ಶ್ರೀ ಮತ್ತೆ ಕೋಣೆಲಿ ಬಾಗಿಲು ಹಾಕ್ಕೊಂಡು ಗೀಚ್ತ ಕೂರಬೇಡ. ನಾಳೆ ಅದೇನೊ ಇಂಪಾರ್ಟೆಂಟ್ ಮೀಟಿಂಗ್ ಅಂತಿದ್ದೆ ಬೇಗ ಹೋಗಬೇಕು ಅಂತ. ಈಗ ಮಲಗು ಅಂದ್ರೆನೆ ಬೇಗ ಎಳೊಕ್ ಆಗೊದು ”

“ ನನಗ್ಯಾಕೆ ಮೀಟಿಂಗ್ ಇರೊದ್ನ ನೆನಪಸ್ತಿದ್ದೀಯ ಅಂತ ಗೊತ್ತು ಬಿಡಮ್ಮ. ಮನೆ ಕೆಲಸ ತಾನೆ ? ಮುಗಿಸಿಟ್ಟೆ ಹೋಗ್ತೀನಿ ಸಮಾಧಾನನ ?”

“ ಅಬ್ಬ ಅಷ್ಟಾದರೂ ನೆನಪಿದೆ ಅಲ್ವ ”

“ ಸರಿ ಸರಿ ಮಲಗು ” ಎಂದ ಶ್ರೀಪ್ರದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಳು. ತನ್ನ ಕೈಯಲ್ಲಿದ್ದ ಡೈರಿಯನ್ನು ನೋಡಿ ನಸು ನಕ್ಕು ‘ ನೀನೊಬ್ಬನೆ ನನಗೆ ಆಸರೆ ನೀನು ಭದ್ರವಾಗಿ ನಿನ್ನ ಜಾಗದಲ್ಲಿ ಇರು ’ ಎಂದವಳು ತನ್ನ ಗುಪ್ತವಾದ ಜಾಗದಲ್ಲಿ ಬಚ್ಚಿಟ್ಟಳು.…
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

“ ಶುನಃಶ್ಯೇಪ ” ಏನು ಹೇಳಲಿ ಇವನ ಬಗ್ಗೆ ? ಅವನೊಬ್ಬ ನತದೃಷ್ಟ ಬಾಲಕ. ಹೆತ್ತವರಿದ್ದರೂ ಅವರ ಸಮವಾದ ಪ್ರೀತಿ ಸಿಗದೆ ಬಳಲಿ ಬೆಂಡಾದ ಹಿಡಿ ಪ್...

     ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ದಿಕ್ಕಿಲ್ಲದ ಚಿರತೆಮರಿಯಂತೆ ಎಲ್ಲೆಂದರಲ್ಲಿ ಓಡುತ್ತಿದ್ದ ಇಪ್ಪತ್ತೆರಡರ ಹುಡುಗಿ, ಒಮ್ಮೆ ಮುಖದ ಮೇಲಿ...
05/06/2026


ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ದಿಕ್ಕಿಲ್ಲದ ಚಿರತೆಮರಿಯಂತೆ ಎಲ್ಲೆಂದರಲ್ಲಿ ಓಡುತ್ತಿದ್ದ ಇಪ್ಪತ್ತೆರಡರ ಹುಡುಗಿ, ಒಮ್ಮೆ ಮುಖದ ಮೇಲಿಂದ ನೀರನ್ನು ಬಸಿದು ಹಿಂದಿರುಗಿ ನೋಡಿದಳು.

ಆಕೃತಿ ತೀರ ಸನಿಹದಲ್ಲೇ ಇದೆ!

ದುರ್ಭಿಕ್ಷದಲ್ಲಿ ಅಧಿಕಮಾಸವೆನ್ನುವಂತೆ ಅದೇ ಘಳಿಗೆಗೊಂದು ಘೋರಬೆಳಕಿನ ಮಿಂಚೂ ಬಡಿದುಬಿಟ್ಟಿತ್ತು. ಆ ಕ್ಷಣಕ್ಕೆ ಅವಳ ನರನಾಡಿಯಾಳದಿಂದ ಹೊರಟ ಆಳವಾದ ಉದ್ಗಾರವೊಂದು, ದೀರ್ಘವಾದ ಉಚ್ಛ್ವಾಸದೊಂದಿಗೆ ಸೇರಿಕೊಂಡು, ಮಳೆಯ ಸದ್ದಿನ ನಡುವೆ ಲೀನವಾಯಿತು. ತೆಗೆದುಕೊಂಡ ಉಸಿರನ್ನು ಹೊರದಬ್ಬಲು ಕಷ್ಟಪಡುತ್ತಿದ್ದವಳ ಅಗಲ ಕಂಗಳೊಳಗೆ ಮಳೆಹನಿಗಳು ಯದ್ವಾತದ್ವಾ ದಾಳಿ ನಡೆಸತೊಡಗಿದ್ದವು.

ಅವಳು ಪ್ರಯತ್ನ ನಿಲ್ಲಿಸಲಿಲ್ಲ. ಕಣ್ಣನ್ನೊಮ್ಮೆ ಕೊಡವಿಕೊಂಡು ಮತ್ತೆ ಓಡತೊಡಗಿದಳು. ಬೆಳಕಿಗೆಂದು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡಿದ್ದ ಮೊಬೈಲ್ ಮಳೆನೀರಿನೊಡನೆ ಜಾರಿಹೋಗಲು ಆಗಾಗ ಪ್ರಯತ್ನಿಸುತ್ತಲೇ ಇತ್ತು. ಅದರ ಪ್ರಯತ್ನವನ್ನು ಪ್ರತೀಬಾರಿಯೂ ವಿಫಲಗೊಳಿಸಿ, ಹಿಡಿತವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಓಡುತ್ತಲೇ ಇದ್ದಳು ಅವಳು.

ಹಿಂಬಾಲಿಸಿ ಬರುತ್ತಿದ್ದ ಆಕೃತಿ ಕ್ಷಣಕಳೆದಂತೆ ಹತ್ತಿರಾಗುತ್ತಲೇ ಇದೆ! ಅವಳಿಗೀಗ ಸುತ್ತಲಿನ ಶಬ್ಧವನ್ನು ಆಲಿಸಲೂ ಭಯ. ಅಷ್ಟು ಹೊತ್ತು ಸುರಿದ ಮಳೆಯ ನೀರು ಅಲ್ಲಲ್ಲೇ ನಿಂತು, ಅದರ ಮೇಲೆ ಹೆಜ್ಜೆಯಿಟ್ಟಾಗ ಬರುವ ಚಳ್ಳೆನ್ನುವ ಸದ್ದೂ ಅವಳಲ್ಲಿ ನಡುಕ ಹುಟ್ಟಿಸುತ್ತಿತ್ತು. ಅದು ಅವಳ ಹಿಂದೆಯೇ ಓಡಿಬರುತ್ತಿದ್ದ ಆ ಬೂಟುಗಾಲಿನ ಹೆಜ್ಜೆಸದ್ದು!

ಮಳೆ-ಕತ್ತಲಿನ ಜೊತೆ ದೀರ್ಘಯುದ್ಧ ನಡೆಸಿದ ಮೊಬೈಲಿನ ಬೆಳಕು ಕೊನೆಗೊಮ್ಮೆ ಸೋಲತೊಡಗಿತ್ತು. ಜೊತೆಗೆ ಅವಳೂ ನಿಧಾನವಾಗಿ ಸೋಲೊಪ್ಪಿಕೊಳ್ಳತೊಡಗಿದ್ದಳು. ಈ ಸೂಚನೆಯನ್ನು ವಿಧೇಯವಾಗಿ ಪಾಲಿಸುವಂತೆ ಅವಳ ಬಲಗಾಲು ಏನನ್ನೋ ಎಡವಿತು. ಅದರ ಹಿಂದೇ ಎಡಗಾಲು ಕೂಡ! ಕವುಚಿ ಬಿದ್ದಳು ಹುಡುಗಿ. ಠಣ್ ಎಂಬ ಸದ್ದೂ ಅದರ ಬೆನ್ನಲ್ಲೇ ಕೇಳಿಸಿತ್ತು. ಅವಳು ಬಿದ್ದಲ್ಲಿಂದಲೇ ತಡಕಾಡಿ ನೋಡಿದಳು. ಕೈಗೆ ಒಂದಷ್ಟು ಕಲ್ಲುಗಳು ಸಿಕ್ಕವು. ನೆಲಕ್ಕೆ ಬಿದ್ದಾಗ ಸಲಾಕೆಯಂಥ ಯಾವುದೋ ಲೋಹದ ವಸ್ತು ಕಣಕಾಲಿಗೆ ಬಡಿದು ವಿಪರೀತ ನೋವುಂಟು ಮಾಡಿತ್ತು. ಅಂಥದ್ದೇ ಸರಳು ಇನ್ನೊಂದು ಬದಿಯಲ್ಲೂ ಸಿಕ್ಕಾಗ ಅವಳಿಗೆ ತಾನೇಲ್ಲಿದ್ದೇನೆ ಎನ್ನುವುದು ಅರಿವಾಯಿತು. ರೈಲ್ವೇಹಳಿ!

ಒಮ್ಮೆ ಮೌನ. ಹಿಂದಿನಿಂದ ಕೇಳಿಬರುತ್ತಿದ್ದ ಹೆಜ್ಜೆ ಸಪ್ಪಳ ನಿಂತಿತು. ಅವಳಿಗೆ ಗೊತ್ತು. ಇನ್ನೇನೂ ಉಳಿದಿಲ್ಲ. ಆಕೃತಿ ತನ್ನ ಹಿಂದೆಯೇ ನಿಂತಿದೆ.

ಒಮ್ಮೆ ಹಾಗೇ ನೆಲಕ್ಕೆ ತಲೆಯಾನಿಸಿ, "ಇಷ್ಟೇನಾ? ನನ್ನ ಬದುಕು ಇಷ್ಟಕ್ಕೇ ಮುಗಿದುಹೋಯಿತಾ?" ಎಂದುಕೊಳ್ಳುವಾಗ ವಿಪರೀತ ಸಂಕಟ ಅವಳನ್ನು ಆವರಿಸಿತ್ತು. ಹಾಗೇ ಬಿಕ್ಕಿದಳು. ಈ ಬಾರಿ ಕಣ್ಣೀರು ಮಳೆಹನಿಯೊಂದಿಗೆ ಲೀನವಾಯಿತು.

ಅವಳು ಅಳು ನಿಲ್ಲಿಸುವವರೆಗೂ ಅಲ್ಲೇನೂ ಬದಲಾವಣೆಯಾಗಿರಲಿಲ್ಲ. ಆಕೃತಿ ನಿಂತಲ್ಲೇ ನಿಂತು ಅವಳನ್ನೇ ಗಮನಿಸುತ್ತಿತ್ತು. ಗಾಬರಿಮಿಶ್ರಿತ ಕುತೂಹಲದೊಂದಿಗೆ ಅವಳು ನಿಧಾನವಾಗಿ ತಲೆಯೆತ್ತಿ ಆಕೃತಿಯ ಗುರುತು ಪತ್ತೆ ಮಾಡಲೆತ್ನಿಸಿದಳು.

ಆಗ ಬಿದ್ದಿತ್ತು ಏಟು! ಒಮ್ಮೆಗೇ ಮೈಮೇಲೆ ಸಾವಿರ ವೋಲ್ಟುಗಳ ಶಾಕ್ ಹೊಡೆದಂಥ ಅನುಭವ! ಅವಳ ಜೀವ ಕಸುವು ಕಳೆದುಕೊಳ್ಳಲು ಅದೇ ಸಾಕಿತ್ತು. ಮತ್ತೆ ರೈಲ್ವೇಹಳಿಯ ಮೇಲೆ ತಲೆಯಾನಿಸಿ ಕಣ್ಮುಚ್ಚಿತು ಹುಡುಗಿ. ಹಳಿಯ ಸ್ಟೀಲ್‌ರೈಲಿನ ಮೇಲೆ ಅವಳ ಕೈತಾಕಿದ ಜಾಗದಲ್ಲಿ, ಒಮ್ಮೆ ಸಣ್ಣಗೆ ಕಿಡಿಹಾರಿ, ಬಳಿಕ ಮಳೆಹನಿಗಳ ಬಿರುಸಿಗೆ ಸೋತು ಹಾಗೇ ತಣ್ಣಗಾಗಿತ್ತು.

ಆಕೃತಿ ನಿಧಾನವಾಗಿ ಕುಳಿತು, ಬೆಳಕು ಬೀರಿತು. ಮಳೆಹನಿಗಳ ದಾಳಿಗೆ ಸಿಕ್ಕು ಚೆಲ್ಲಾಪಿಲ್ಲಿಯಾದರೂ ಗಮ್ಯ ಸೇರುವಲ್ಲಿ ವಿಫಲವಾಗುವುದಿಲ್ಲ ಬೆಳಕು. ಕಪ್ಪಗಿನ ಆ ಆಕೃತಿ ಅವಳ ಕಿವಿಯ ಹಿಂದಿನ ಕೂದಲನ್ನು ಸರಿಸಿ ಏನನ್ನೋ ಪರೀಕ್ಷಿಸಿತು. ಬಳಿಕ, ಬಂದ ಕೆಲಸ ಮುಗಿಯಿತೆನ್ನುವಂತೆ ಎದ್ದು, ಬಂದಷ್ಟೇ ವೇಗದಲ್ಲಿ ಕಣ್ಮರೆಯಾಯಿತು....
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...

ಸೂಚನೆ: 'ಆವರ್ತ' ಸಂಪೂರ್ಣ ಕಾಲ್ಪನಿಕ ಕಥೆಯಾಗಿದ್ದು, ಇಲ್ಲಿ ನೀಡಲಾಗಿರುವ ವೈಜ್ಞಾನಿಕ ವಿವರಣೆಗಳು ಪ್ರಾಯೋಗಿಕವಾಗಿ ಧೃಢೀಕರಿಸಲ್ಪಟ್....

Address

PRATILIPI, Sona Towers, 4th Floor, No. 2, 26, 27 And 3, Hosur Road, Krishna Nagar, Industrial Area, Near Forum Mall
Bangalore
560029

Alerts

Be the first to know and let us send you an email when Pratilipi Kannada - ಪ್ರತಿಲಿಪಿ ಕನ್ನಡ posts news and promotions. Your email address will not be used for any other purpose, and you can unsubscribe at any time.

Contact The Business

Send a message to Pratilipi Kannada - ಪ್ರತಿಲಿಪಿ ಕನ್ನಡ:

Share